ಒಬ್ಬ ವ್ಯಕ್ತಿಯ ಅಸಮಾಧಾನ ಎಲ್ಲರ ಅಸಮಾಧಾನ ಅಲ್ಲ: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ, ಅ.8: ಒಬ್ಬ ವ್ಯಕ್ತಿಯ ಅಸಮಾಧಾನ ಎಲ್ಲರ ಅಸಮಾಧಾನ ಅಲ್ಲ. ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದನ್ನು ಕಮಿಟಿ ನಿರ್ಧಾರ ಮಾಡುತ್ತೆ ವಿನಹ ಯಾವುದೇ ಒಬ್ಬ ವ್ಯಕ್ತಿ ತೆಗೆದುಕೊಳ್ಳಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಕಲಬುರಗಿ ನಗರದಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಕೆಲವರಿಗೆ ನಾನೇ ಟಿಕೆಟ್ ತಪ್ಪಿಸಿದ್ದು ಎನ್ನುವುದು ಸರಿಯಲ್ಲ. ಅನೇಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಸೂಕ್ತ ಅಭ್ಯರ್ಥಿಗಳನ್ನು ಹುಡುಕಿ ಟಿಕೆಟ್ ನೀಡಲಾಗಿದೆ. ಸೋಲು ಗೆಲವು ಮುಂದೆ ನಿರ್ಧಾರವಾಗುತ್ತದೆ ಎಂದರು.
Next Story