'ಮಹಾರಾಷ್ಟ್ರಕ್ಕೆ ನೀರು ಹಂಚಿಕೆ' ಎಂಬ ಬಿಎಸ್ವೈ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ...
ಫೈಲ್ ಚಿತ್ರ
ಬೆಂಗಳೂರು, ಅ. 18: ‘ಎರಡು ರಾಜ್ಯಗಳ ನಡುವಿನ ನೀರಿನ ಹಂಚಿಕೆಗೆ ಸಂಬಂಧಿಸಿದ ವಿಚಾರಗಳು ಮಾತುಕತೆಯಾಗದೆ ನೀರು ಹರಿಸುತ್ತೇವೆ ಎನ್ನುವುದು ಕೇವಲ ಮತ ಗಳಿಕೆಗೆ ಸೀಮಿತವಾದ ಹೇಳಿಕೆಯಾಗುತ್ತದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಯನ್ನು ಟೀಕಿಸಿದ್ದಾರೆ.
‘ಮಹಾರಾಷ್ಟ್ರ ರಾಜ್ಯದ ಜನ ತಮ್ಮ ಪಕ್ಷಕ್ಕೆ ಮತ ನೀಡಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೆ ಹೇಳಿರಬಹುದು. ಆದರೆ ವಾಸ್ತವ ಚಿತ್ರಣವೇ ಬೇರೆಯಿದೆ’ ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ, ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
Next Story