ಮಾದಾಪಟ್ಟಣ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಗುಂಡ್ಲುಪೇಟೆ, ಅ.26: ತಾಲೂಕಿನ ಮಾದಾಪಟ್ಟಣ ಸಮೀಪ ತಮ್ಮಯ್ಯ ಶೆಟ್ಟಿ(ಮಹದೇವ ಶೆಟ್ಟಿ) ಎಂಬವರ ಅಸಹಜ ಸಾವಿನ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ
ಮಾದಾಪಟ್ಟಣ ಗ್ರಾಮದ ಶಂಕರ ಹಾಗೂ ಶಿವರಾಜು ಬಂಧಿತ ಆರೋಪಿಗಳು.
ತಮ್ಮಯ್ಯಶೆಟ್ಟಿಯೊಂದಿಗೆ ಆರೋಪಿಗಳು ಮಂಗಳವಾರ ಸಂಜೆ ಬೇಗೂರಿಗೆ ಹೋಗಿ ಮದ್ಯಪಾನ ಮಾಡಿ ಗ್ರಾಮಕ್ಕೆ ಹಿಂದಿರುಗುವಾಗ ಮಾತಿಗೆ ಮಾತು ಬೆಳೆದು ಶಂಕರ ಹೊಡೆದ ಪೆಟ್ಟಿಗೆ ಕೆಳಗೆಬಿದ್ದ ತಮ್ಮಯ್ಯಶೆಟ್ಟಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಅಲ್ಲಿಂದ ಕಾಲ್ಲಿತ್ತ ಆರೋಪಿಗಳು ಗ್ರಾಮಕ್ಕೆ ತೆರಳಿದ್ದರು. ಬೆಳಗ್ಗೆ ಯಾವುದೋ ಪ್ರಾಣಿ ತಮ್ಮಯ್ಯಶೆಟ್ಟಿಯ ಮುಖವನ್ನು ತಿಂದು ಹಾಕಿದ್ದರಿಂದ ತಾವು ಸಿಕ್ಕಿಬೀಳುವುದಿಲ್ಲ ಎಂದು ಭಾವಿಸಿದ್ದರು.
ತನಿಖಾ ಕಾರ್ಯ ಕೈಗೊಂಡ ಪೊಲೀಸರು ಗುಪ್ತವಾಗಿ ಮಾಹಿತಿ ಸಂಗ್ರಹಿಸಿದಾಗ ಮೂವರು ಒಟ್ಟಾಗಿ ಬೇಗೂರಿನಲ್ಲಿ ಕುಡಿಯುತ್ತಿದ್ದುದನ್ನು ಪತ್ತೆಹಚ್ಚಿದರು. ಈ ಸಂದರ್ಭದಲ್ಲಿ ಸಿಕ್ಕಿಬೀಳುವ ಭೀತಿಗೊಳಗಾದ ಶಿವರಾಜು ಗುರುವಾರ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದನು.
ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡರು.
ಎಸ್ ಪಿ ಆನಂದಕುಮಾರ್ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಮಹದೇವಸ್ವಾಮಿ, ತೆರಕಣಾಂಬಿ ಠಾಣೆಯ ಪಿ ಎಸ್ ಐ ರಾಧಮ್ಮ, ಪ್ರೊಬೆಷನರಿ ಪಿ ಎಸ್ ಐ ಮಂಜುನಾಥ, ಸಿಬ್ಬಂದಿ ಗುರುಮಲ್ಲಪ್ಪ, ರಾಜು ಆರೋಪಗಳನ್ನು ವಶಕ್ಕೆ ಹೆಚ್ಚಿನ ವಿಚಾರ ನಡೆಸುತ್ತಿದ್ದಾರೆ.