ಸಿದ್ದಾಪುರ: ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ ಯೋಜನೆ; ಎಂ.ಎಂ.ಎ ಸಂಸ್ಥೆಯಿಂದ ಸ್ಥಳ ಪರಿಶೀಲನೆ
ಸಿದ್ದಾಪುರ, ನ.22: ಆಗಸ್ಟ್ ತಿಂಗಳಲ್ಲಿ ಸುರಿದ ಮಹಾ ಮಳೆಗೆ ಸಿದ್ದಾಪುರ ಸುತ್ತಮುತ್ತಲಿನ ನದಿ ದಡದ ನಿವಾಸಿಗಳು ಮನೆ ಆಸ್ತೆ ಪಾಸ್ತಿ ಕಳೆದು ಕೊಂಡು ಸಂಕಷ್ಟಕ್ಕೆ ಒಳಗಾಗಿದ್ದು, ಶಾಶ್ವತ ಸೂರು ಕಲ್ಪಿಸುವ ಕಾರ್ಯ ವಿಳಂಬವಾಗಿರುವುದರಿಂದ ಬೆಂಗಳೂರಿನ ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಸಂಸ್ಥೆ ವತಿಯಿಂದ ಸಿದ್ದಾಪುರ ಸುತ್ತಮುತ್ತಲಿನ ಸುಮಾರು 25 ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಿಸುವ ಯೋಜನೆಯನ್ನು ಸಿದ್ದಪಡಿಸಿದ್ದು, ಸಿದ್ದಾಪುರ ನೆಲ್ಯಹುದಿಕೇರಿ ಭಾಗದಲ್ಲಿ ಕೆಲವು ಖಾಸಗಿ ಜಾಗಗಳನ್ನು ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭ ಎಂ.ಎಂ.ಎ ಸಂಸ್ಥೆಯ ಅಧ್ಯಕ್ಷ ಎನ್.ಎ ಮುಹಮ್ಮದ್ ಹಾಜಿ, ಪ್ರಮುಖರಾದ ಸಿ.ಹೆಚ್ ಮಹಮೂದ್ ಹಾಜಿ, ಉಸ್ಮಾನ್, ಲತೀಫ್ ಹಾಜಿ, ಸ್ಥಳೀಯರಾದ ಕೆ. ಉಸ್ಮಾನ್ ಹಾಜಿ, ಕೆ.ಎಂ ಬಶೀರ್, ಎ.ಕೆ ಅಬ್ದುಲ್ಲಾ, ಮುಹಮ್ಮದ್, ಹಕೀಂ ಸೇರಿದಂತೆ ಹಲವರಿದ್ದರು.
Next Story