ಪದವೀಧರರು ಎಚ್ಚರಿಕೆಯಿಂದ ಮತ ಚಲಾಯಿಸಿ: ಕೆ.ಎಸ್. ಭಗವಾನ್ ಕರೆ
ಹಾಸನ, ಮೇ 30: ಜೂನ್ 9 ರಂದು ನಡೆಯಲಿರುವ ದಕ್ಷಿಣ ಪದವಿದರ ಕ್ಷೇತ್ರದ ಚುನಾವಣೆಯಲ್ಲಿ ಪ್ರಜ್ಞಾವಂತ ಪದವಿದರರು ಎಚ್ಚರಿಕೆಯಿಂದ ಯೋಚಿಸಿ ಚಲಾಯಿಸುವಂತೆ ವಿಚಾರವಾದಿ ಮತ್ತು ಚುನಾವಣಾ ಅಭ್ಯರ್ಥಿ ಭಗವಾನ್ ಕರೆ ನೀಡಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರ ಕ್ಷೇತ್ರದ ಚುನಾವಣೆ ಪ್ರಜ್ಞಾವಂತರ ವೇದಿಕೆಯಾಗಿದೆ. ಅತ್ಯುತ್ತಮ ವ್ಯಕ್ತಿಯನ್ನು ಆರಿಸುವ ಜವಾಬ್ದಾರಿ ಇದೆ. ಆದರೆ ಹಣಕಾಸು ಉಳ್ಳವರು, ಉದ್ಯಮಿಗಳು ಸೇರಿದಂತೆ ಇತರೆ ಕ್ಷೇತ್ರದಲ್ಲಿ ಇರುವವರು ಆಯ್ಕೆ ಆಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ 40 ವರ್ಷಗಳಿಂದ ರೈತ, ದಲಿತ, ಭಾಷಾ, ಮಹಿಳಾ ಚಳುವಳಿ ಹೋರಾಟ ಮಾಡುತ್ತಾ ಬಂದಿದ್ದೇನೆ ಎಂದು ಹೇಳಿದರು. ಸಂವಿಧಾನ ಹೇಳಿರುವುದು ಸಮಾಧಾನ ನಡೆ. ಆದರೆ ಅಸಮಾಧಾನ ನಡುವೆ ಘರ್ಷಣೆ ನಡೆಯುತ್ತಿದೆ. ಎಲ್ಲಾ ಪದವಿದರರು ಎಚ್ಚರಿಕೆಯಿಂದ ಗಮನಿಸಿ ಮತ ಹಾಕುವ ಮೂಲಕ ಉತ್ತಮನನ್ನು ಆಯ್ಕೆ ಮಾಡಲು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್.ಪಿ.ಐ. ಸತೀಶ್, ಎಎಪಿ ಮುಖಂಡ ಅಕ್ಮಲ್ ಜಾವೀದ್, ಸಾಹಿತಿ ಜ.ಹೋ. ನಾರಾಯಣಸ್ವಾಮಿ, ರವೀಂದ್ರ ಬಾಬು, ಮರೀಜೋಸೇಪ್ ಉಪಸ್ಥಿತರಿದ್ದರು.