ಕಲ್ಲು ಗಣಿ ಮಾಲಕರಿಂದ ಹಣ ಪಡೆದಿಲ್ಲ: ಬಿಎಸ್ವೈ ಪುತ್ರ ವಿಜಯೇಂದ್ರ ಪ್ರಮಾಣ
ಮಂಡ್ಯ, ಜೂ.23: ದೇವಸ್ಥಾನದ ಬಳಿ ನಿಂತು ಹೇಳುತ್ತಿದ್ದೇನೆ ಕಲ್ಲುಗಣಿ ಮಾಲಕರಿಂದ ಒಂದು ರೂಪಾಯಿಯನ್ನೂ ಮುಟ್ಟಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಗ್ರಾಮಸ್ಥರ ಎದುರು ಪ್ರಮಾಣ ಮಾಡಿದ ಪ್ರಸಂಗ ನಡೆದಿದೆ.
ಸಾಸಲು ಸೋಮೇಶ್ವರ ದೇವಾಲಯದ ಎದುರು ವಿಜಯೇಂದ್ರ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು, ಕೆಆರ್ಎಸ್ ಜಲಾಶಯಕ್ಕೆ ಅಪಾಯವಿರುವುದರಿಂದ ಕಲ್ಲು ಗಣಿಗಾರಿಕೆ ನಿಷೇಧಿಸಲಾಗಿದೆ. ಆದರೆ, ನಿಷೇಧಾಜ್ಞೆ ತೆರವಿಗೆ ತಮಗೆ ದುಡ್ಡು ಕೊಟ್ಟಿದ್ದೇವೆ ಎಂದು ಕೆಲವು ಗಣಿ ಮಾಲಕರು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅಕ್ರಮ ಕಲ್ಲುಗಣಿಗಾರಿಕೆ ನಿಷೇಧಿಸಲು ಮನವಿ ಮಾಡಿದ್ದೆವು. ಅಂತೆಯೇ ಗಣಿಗಾರಿಕೆ ನಿಷೇಧಿಸಲಾಗಿದೆ. ಆದರೂ, ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ, ಸಿಪಿಐ ರವೀಂದ್ರ ಜೆಡಿಎಸ್ ಏಜೆಂಟ್ ರೀತಿ ನಡೆಸುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
Next Story