ಕೊರೋನ ಸೋಂಕು ದೃಢಪಟ್ಟ ಬಳಿಕ ಯುವಕ ಪರಾರಿ
ಸಾಂದರ್ಭಿಕ ಚಿತ್ರ
ಹಾವೇರಿ, ಜು.5: ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದ ಯುವಕನೋರ್ವ, ಸೋಂಕು ದೃಢಪಟ್ಟಿರುವ ಹಿನ್ನೆಲೆ ಪರಾರಿಯಾಗಿರುವ ಘಟನೆ ನಡೆದಿದೆ.
ರಟ್ಟೀಹಳ್ಳಿ ತಾಲೂಕಿನ ಪರ್ವತಶಿದ್ಗೇರಿ ಗ್ರಾಮದ ಯುವಕ ಪರಾರಿ ಆಗಿದ್ದಾನೆ ಎಂದು ಹೇಳಲಾಗುತ್ತಿದೆ.
ಇತ್ತೀಚಿಗೆ ರೋಗ ಲಕ್ಷಣಗಳು ಕಂಡುಬಂದ ಹಿನ್ನೆಲೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ರವಿವಾರ ಯುವಕನ ಮೊಬೈಲಿಗೆ ಕೊರೋನ ಸೋಂಕು ಇರುವುದಾಗಿ ಸಂದೇಶ ರವಾನೆ ಆಗಿದೆ. ತದನಂತರ, ಮೊಬೈಲ್ಗೆ ಹಾನಿ ಮಾಡಿ ಪರಾರಿ ಆಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ರಟ್ಟೀಹಳ್ಳಿ ಠಾಣಾ ಪೊಲೀಸರು ಸೋಂಕಿತನ ಹುಡುಕಾಟ ನಡೆಸುತ್ತಿದ್ದಾರೆ.
Next Story