ಕಲಬುರಗಿ: ಉಮರ್ ಖಾಲಿದ್ ಬಿಡುಗಡೆಗೆ ಆಗ್ರಹಿಸಿ ಧರಣಿ
ಕಲಬುರಗಿ, ಸೆ.19: ವಿದ್ಯಾರ್ಥಿ ನಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ಉಮಾರ್ ಖಾಲಿದ್ ಅವರ ಬಂಧನ ಖಂಡಿಸಿ ಹಾಗೂ ಸಿಎಎ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿ ಬಂಧಿತ ಎಲ್ಲ ಅಮಾಯಕರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಧರಣಿ ನಡೆಯಿತು.
ಪಕ್ಷದ ಮುಖಂಡ ಸಲೀಂ ಚಿತಾಪುರಿ ಮಾತನಾಡಿ ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.
ಬಳಿಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ತಾಮಿರೆ ಮಿಲ್ಲತ್, ಮುಸ್ಲಿಂ ಲೀಗ್, ನಯ ಸವೇರಾ ಸಂಘಟನೆ ಹಾಗೂ ಎಸ್ಡಿಪಿಐ ಪಕ್ಷದ ಸಹಯೋಗದಲ್ಲಿ ನಡೆದ ಧರಣಿಯಲ್ಲಿ ಮೊಯ್ದಿನ್ ಪಟೇಲ್ ಅಣಬಿ, ಮುಬೀನ್ ಅಹ್ಮದ್, ಸಲೀಂ ಸಗ್ರಿ, ಮುನೀರ್ ಹಾಸ್ಮಿ ಅಬ್ದುಲ್ ಅಝೀಝ್ ಪಟೇಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.
Next Story