ಎನ್ಎಂಪಿಟಿಯಲ್ಲಿ ಗೇಟ್ ತುಂಡಾಗಿ ಬಿದ್ದು ಸಿಐಎಫ್ಎಫ್ ಯೋಧ ಸಾವು
ಮಂಗಳೂರು, ನ.17: ಇಲ್ಲಿನ ಪಣಂಬೂರು ಎನ್ಎಂಪಿಟಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಗೇಟ್ ತುಂಡಾಗಿ ಮೈಮೇಲೆ ಬಿದ್ದ ಪರಿಣಾಮವಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಯೋಧ ವಿಟ್ಲದ ಈಶ್ವರ ನಾಯ್ಕ್ ಎಂಬವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಮುಂಜಾನೆ 5:45ಕ್ಕೆ ಶಿಥಿಲಾವಸ್ಥೆಯಲ್ಲಿದ್ದ ಗೇಟ್ ಮುರಿದು ಬಿದ್ದಾಗ ಈಶ್ವರ ನಾಯ್ಕ್ ಗೇಟ್ ನಡಿಯಲ್ಲಿ ಸಿಲುಕಿಕೊಂಡು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story