ಈ ಜನ್ಮದಲ್ಲಿ ನಾನು ಬ್ರಿಗೇಡ್ ಒಪ್ಪುವ ಪ್ರಶ್ನೆಯೇ ಇಲ್ಲ: ಯಡಿಯೂರಪ್ಪ
ಕಲಬುರಗಿ,ಜ.22: ಬ್ರಿಗೇಡ್ ಹೆಸರಲ್ಲಿ ಪಕ್ಷ ಸಂಘಟನೆಗೆ ಧಕ್ಕೆಯಾಗುತ್ತಿದ್ದು, ಈ ಜನ್ಮದಲ್ಲಿ ನಾನು ಬ್ರಿಗೇಡ್ ಒಪ್ಪುವ ಪ್ರಶ್ನೆಯೆ ಇಲ್ಲ ಎಂದು ಯಡಿಯೂರಪ್ಪ ಪುನರುಚ್ಚಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ನಿನ್ನೆಯ ಕಾರ್ಯಕಾರಿಣಿ ಸಭೆಯಲ್ಲಿ ಈಶ್ವರಪ್ಪ ಅವರಿಗೆ ಸ್ಪಷ್ಟ ಸಂದೇಶ ನೀಡಿದ್ದೇನೆ. ಇಲ್ಲಿ ಕಾರ್ಯಕಾರಿಣಿ ಸಭೆ ನಡೆಯುವಾಗ ಇನ್ನೆಲ್ಲೋ ಬ್ರಿಗೇಡ್ ಸಮಾವೇಶದಲ್ಲಿ ಪಾಲ್ಗೊಂಡ್ರೆ ತಪ್ಪು ಸಂದೇಶ ಹೋಗುವುದರಿಂದ ಪಕ್ಷದ ಕಾರ್ಯಕರ್ತರಾರು ಬ್ರಿಗೇಡ್ ಸಮಾವೇಶದಲ್ಲಿ ಭಾಗವಹಿಸಬಾರದೆಂದು ಸೂಚಿಸಿದ್ದೇನೆ.
ಈ ಬಗ್ಗೆ ರಾಷ್ಟ್ರೀಯ ನಾಯಕರು ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುತ್ತಾರೆ ಎಂದು ಅವರು ಹೇಳಿದ್ದಾರೆ.
Next Story