ಜಾನುವಾರುಗಳ ಅಪಹರಣ
ದಾವಣಗೆರೆ,ಜ.23: ಕೊಟ್ಟಿಗೆಯಲ್ಲಿ ಕಟ್ಟಿದ್ದ ಸುಮಾರು 1.25 ಲಕ್ಷ ರೂ. ವೌಲ್ಯದ ಮೂರು ಜಾನುವಾರುಗಳನ್ನು ಕಳ್ಳರು ಅಪಹರಿಸಿರುವ ಘಟನೆ ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನಡೆದಿದೆ.
ಚನ್ನಬಸವನಗೌಡ ಎಂಬವರು ಎಂದಿನಂತೆ ಜಾನುವಾರುಗಳನ್ನು ಮೇಯಿಸಿಕೊಂಡು ಬಂದು ತಮ್ಮ ಕಣದಲ್ಲಿರುವ ಕೊಟ್ಟಿಗೆಯಲ್ಲಿ ಎರಡು ಎತ್ತುಗಳು ಮತ್ತು ಒಂದು ಆಕಳನ್ನು ರಾತ್ರಿವೇಳೆ ಕಟ್ಟಿಹಾಕಿ ಮನೆಯಲ್ಲಿ ಮಲಗಿದ್ದರು. ಬೆಳಗ್ಗೆ ಬಂದು ನೋಡಿದಾಗ ಮೂರೂ ಜಾನುವಾರುಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಕಳವಾಗಿರುವ ಮೂರು ಜಾನುವಾರುಗಳ ವೌಲ್ಯ 1.25 ಲಕ್ಷ ರೂ. ಎಂದು ಚನ್ನಬಸವನಗೌಡ ಜಗಳೂರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Next Story