1,000 ರೂಪಾಯಿಗೋಸ್ಕರ ಸ್ನೇಹಿತನಿಗೆ ಚಾಕುವಿನಿಂದ ಇರಿದ!
ಚಿಕಿತ್ಸೆ ವಿಳಬಂಕ್ಕೆ ಸಂಬಂಧಿಕರಿಂದ ಪ್ರತಿಭಟನೆ
ತುಮಕೂರು, ಫೆ.25: ಒಂದು ಸಾವಿರ ರೂಪಾಯಿಗೋಸ್ಕರ ಸ್ನೇಹಿತನಿಗೆ ಚಾಕುವಿನಿಂದ ಇರಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ.
ನವೀನ್ 35 ಚಾಕುವಿನಿಂದ ಹಿರಿತಕ್ಕೊಳಗಾದ ವ್ಯಕ್ತಿ, ಬಾಬು ಚಾಕುವಿನಿಂದ ಇರಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಬಾಬು ,ನವೀನ್ ಇಬ್ಬರು ಸ್ನೇಹಿತರಾಗಿದ್ದು ಕಾರ್ಪೇಂಟರ್ ಕೆಲಸ ಮಾಡುತ್ತಿದ್ದರು. ನವೀನ್ ಗೆ ಬಾಬು ಪ್ಲೇವುಡ್ ಶೀಟ್ ತರಲು ಸಾವಿರ ಹಣ ನೀಡಿದ್ದ. ಪ್ಲೇವುಡ್ ತಂದು ಕೊಡಲು ತಡ ಮಾಡಿದ್ದ ನವೀನ್ ಗೆ ಚಾಕುವಿನಿಂದ ಚುಚ್ವಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ನವೀನ್ ಕಲ್ಲೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿ ಎಸ್ ಪುರ ಪೋಲಿಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿ ಆರೋಪಿ ಬಾಬು ವನ್ನ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಸಿ ಎಸ್ ಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕಿತ್ಸೆ ವಿಳಬಂಕ್ಕೆ ಸಂಬಂಧಿಕರಿಂದ ಪ್ರತಿಭಟನೆ:
ಇನ್ನೊಂದೆಡೆ ಚಾಕುವಿನಿಂದ ಇರಿತಕ್ಕೊಳಗಾದ ವ್ಯಕ್ತಿ ಗೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ನೀಡಲು ವಿಳಂಬವಾಗಿದೆ.
ಈ ಬಗ್ಗೆ ಗಾಯಾಳು ಸಂಬಂಧಿಕರು ಕಲ್ಲೂರಿನ ಸರಕಾರಿ ಆಸ್ಪತ್ರೆ ಮುಂದೆ ಪ್ರತಿಭಟಿಸಿದರು.
ಶೂಶ್ರೂಕಿಯಿಂದ ಚಾಕುವಿನಿಂದ ಇರಿತಕ್ಕೋಳಗಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.
ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಆಸ್ಪತ್ರೆ ಸಿಬ್ಬಂದಿ ತಿಳಿಸಿದಾಗ ಆಸ್ಪತ್ರೆ ಯಲ್ಲಿ ವೈದ್ಯರನ್ನ ನೇಮಕ ಮಾಡಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು