ಜಯನಗರ-ಚಿಕ್ಕಹೊನ್ನೇನಹಳ್ಳಿ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ
ಹಾಸನ,ಮಾ.22: ನಗರದ ಸಮೀಪ ಇರುವ ಜಯನಗರ-ಚಿಕ್ಕಹೊನ್ನೇನಹಳ್ಳಿ ಸುತ್ತ-ಮುತ್ತ ಕಡೆಗಳ ನೂತನ ಬಸ್ ಸಂಚಾರಕ್ಕೆ ಶಾಸಕ ಹೆಚ್.ಎಸ್. ಪ್ರಕಾಶ್ ಇತ್ತಿಚಿಗೆ ಚಾಲನೆ ನೀಡಿದರು.
ನಿವಾಸಿಗಳ ಬಹು ದಿನಗಳ ಬೇಡಿಕೆಯಾಗಿದ್ದ ಸಿಟಿಗೆ ಸಂಪರ್ಕದ ಸಾರಿಗೆ ಬಸ್ ಬಂದಿರುವುದು ಜಯನಗರ-ಚಿಕ್ಕಹೊನ್ನೇನಹಳ್ಳಿ ನಿವಾಸಿಗಳಿಗೆ ಹರ್ಷ ಉಂಟು ಮಾಡಿದೆ. ಇದೆ ವೇಳೆ ಶ್ರೀ ಮಾರುತಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ವೆಂಕಟೇಶ್, ಅಧ್ಯಕ್ಷ ಸಿ.ಎ. ಕೀರ್ತಿಕುಮಾರ್ ಇತರರು ಇದ್ದರು.
Next Story