ತರಗತಿಗೆ ಗೈರು : ತಂದೆಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ
ಮಂಡ್ಯ, ಆ.5: ಕಾಲೇಜಿಗೆ ಸರಿಯಾಗಿ ಹಾಜರಾಗದ ವಿದ್ಯಾರ್ಥಿಯೋರ್ವ ತಂದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಗ್ಗೆ ಶ್ರೀರಂಗಪಟ್ಟಣ ತಾಲೂಕು ದರಸಗುಪ್ಪೆ ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಮಂಡ್ಯ ಪಿಇಎಸ್ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿರುವ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಎಚ್.ಶೆಟ್ಟಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವರ ಪುತ್ರ ಅಮೃತ್(18) ಎಂದು ತಿಳಿದುಬಂದಿದೆ.
ಅಮೃತ್ ಸುಮಾರು ಒಂದು ತಿಂಗಳಿನಿಂದ ಸರಿಯಾಗಿ ಕಾಲೇಜಿಗೆ ಹಾಜರಿಲಿಲ್ಲವೆನ್ನಲಾಗಿದ್ದು, ಶುಲ್ಕ ಪಾವತಿಸುವ ಸಂಬಂಧ ತನ್ನ ತಂದೆ ಕಾಲೇಜಿಗೆ ಬರುತ್ತಿದ್ದು, ತಾನು ಶಾಲೆಗೆ ಗೈರಾಗಿರುವ ವಿಷಯ ಗೊತ್ತಾಗುತ್ತದೆಂದು ಹೆದರಿ ರೈಲಿನಡಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story