ಹನೂರು: ಜೆಡಿಎಸ್ ನಿಂದ ಮಲೈಮಹದೇಶ್ವರಬೆಟ್ಟಕ್ಕೆ ಪಾದಯಾತ್ರೆ
ಹನೂರು, ಆ.22: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲೆಂದು ಹಾರೈಸಿ ಅಭಿಮಾನಿಗಳು ಕನಕಪುರದಿಂದ ಮಲೈಮಹದೇಶ್ವರಬೆಟ್ಟಕ್ಕೆ ಹಮ್ಮಿಕೂಂಡಿದ್ದ ಪಾದಯಾತ್ರೆ ಹನೂರು ಪಟ್ಟಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಇಲ್ಲಿನ ಜೆಡಿಎಸ್ನ ಕಾರ್ಯಕರ್ತರು ಹನೂರಿನ ಕುಮಾರಸ್ವಾಮಿ ಅಭಿಮಾನಿಗಳು ಸ್ವಾಗತಿಸಿದರು.
ಈ ವೇಳೆ ಜೆಡಿಎಸ್ನ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಮಾತನಾಡಿ, ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ ಬಡವರ ಬಂಧು ಎಚ್ .ಡಿ. ಕುಮಾರಸ್ವಾಮಿರವರು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಬೇಕೆನ್ನುವ ಉದ್ದೇಶದಿಂದ ಕನಕಪುರದಿಂದ ಮಹದೇಶ್ವರಬೆಟ್ಟಕೆ ಪಾದಯತ್ರೆ ಹಮ್ಮಿಕೂಂಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಜೆಡಿಎಸ್ನ ಪದಯಾತ್ರೆಯ ನೇತ್ರತ್ವವಹಿಸಿರುವ ಕನಕಪುರ ಕುಮಾರಸ್ವಾಮಿ ಮಾತನಾಡಿ, ಕುಮಾರಸ್ವಾಮಿರವರು ತಮ್ಮ ಆರೋಗ್ಯವನ್ನು ಲೆಕ್ಕಿಸಿದೆ ಕರ್ನಾಟಕದ ನಾನಾ ಭಾಗಗಳಲ್ಲಿ ಪ್ರವಾಸ ಗೈದು ಪಕ್ಷವನ್ನು ಸಂಘಟನೆ ಮಾಡುತ್ತಿದ್ದಾರೆ. ಅವರು ಪಕ್ಷವನ್ನು ಬಲ ಪಡಿಸಲು ಇನ್ನೂ ಹೆಚ್ಚು ಶಕ್ತಿ ನೀಡಲಿ ಹಾಗೂ ಸದಾ ಕಾಲ ಆರೋಗ್ಯವಾಗಿರಲಿ ಎಂಬ ಉದ್ದೇಶದಿಂದ ಮಲೈ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೂಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ನ ಜಿಲ್ಲಾ ಅಧ್ಯಕ್ಷ ಕಾಮರಾಜು ಮಂಜು, ಬಾಬು, ಲೋಕೆಶ್, ವಿಜಯ್, ಪ್ರಶಾಂತ್, ವೆಂಕಟೇಶ್, ಶಿವರಾಮೇಗೌಡ, ನಟರಾಜು, ರಾಜೂಗೌಡ, ಮಹೇಶ್ ಹಾಗೂ ಮಧುಸೂದನ್ ಮತ್ತಿತರರಿದ್ದರು .