ಥಾಯ್ಲೆಂಡ್ ಓಪನ್ನಿಂದ ಹಿಂದೆ ಸರಿದ ಕೆ.ಶ್ರೀಕಾಂತ್
ಬ್ಯಾಂಕಾಕ್, ಜು.10: ಭಾರತದ ಸ್ಟಾರ್ ಶಟ್ಲರ್ ಕಿಡಂಬಿ ಶ್ರೀಕಾಂತ್ ಮಂಗಳವಾರ ಆರಂಭವಾಗಲಿರುವ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ನಾನು ಥಾಯ್ಲೆಂಡ್ ಓಪನ್ನಿಂದ ಹಿಂದೆ ಸರಿಯುತ್ತಿದ್ದು ಇದು ಉತ್ತಮ ಸುದ್ದಿಯಲ್ಲ. ಮುಂಬರುವ ವಿಶ್ವ ಚಾಂಪಿಯನ್ಶಿಪ್ನಲ್ಲಿ ನಾನು ಭಾಗವಹಿಸುತ್ತೇನೆ ಎಂದು ಶ್ರೀಕಾಂತ್ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ಆಡಿರುವ ಇಂಡೋನೇಶ್ಯಾ ಓಪನ್ ಟೂರ್ನಿಯಲ್ಲಿ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಸೋತು ಹೊರ ನಡೆದಿದ್ದರು. ಒಂದು ವಾರದೊಳಗೆ ಜಪಾನ್ನ ಕೆಂಟೊ ಮೊಮೊಟಾ ವಿರುದ್ಧ ಸತತ ಎರಡನೇ ಬಾರಿ ಮೊದಲ ಸುತ್ತಿನಲ್ಲಿ ಸೋತಿದ್ದರು. ಬ್ಯಾಂಕಾಕ್ನಲ್ಲಿ ನಡೆಯುವ ಚಾಂಪಿಯನ್ಶಿಪ್ನಲ್ಲಿ ಪುರುಷರ ಸಿಂಗಲ್ಸ್ ವಿಭಾಗವನ್ನು ಸಮೀರ್ ವರ್ಮಾ ಹಾಗೂ ಪಿ.ಕಶ್ಯಪ್ ಪ್ರತಿನಿಧಿಸಲಿದ್ದಾರೆ. ಈ ಇಬ್ಬರು ಗಾಯದಿಂದ ಚೇತರಿಸಿಕೊಂಡಿದ್ದಾರೆ.
ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಪಿ.ವಿ.ಸಿಂಧು ಬಲ್ಗೇರಿಯದ ಲಿಂಡಾ ಝೆಟ್ಚಿರಿ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ.
Next Story