ಧೋನಿಯೊಂದಿಗೆ ಪಂತ್ ಹೋಲಿಕೆ ಸರಿಯಲ್ಲ: ಕಪಿಲ್
ಗ್ರೇಟರ್ನೊಯ್ಡ, ಎ.3: ‘‘ರಿಷಭ್ ಪಂತ್ ಪ್ರತಿಭಾವಂತ ಕ್ರಿಕೆಟಿಗ. ಆದರೆ ಅವರನ್ನು ಮಹೇಂದ್ರ ಸಿಂಗ್ ಧೋನಿಯೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ’’ಎಂದು ಭಾರತದ ಮೊತ್ತ ಮೊದಲ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ದೇವ್ ಅಭಿಪ್ರಾಯಪಟ್ಟಿದ್ದಾರೆ.
ಪಂತ್ ಇದೀಗ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಮೊದಲ ಆಯ್ಕೆಯ ಕೀಪರ್. ಆದಾಗ್ಯೂ ಮುಂಬರುವ ವಿಶ್ವಕಪ್ನಲ್ಲಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಭಾರತದ ವಿಶ್ವಕಪ್ ತಂಡ ಈ ತಿಂಗಳಾಂತ್ಯದಲ್ಲಿ ಪ್ರಕಟವಾಗಲಿದೆ.
‘‘ನಾವು ಯಾರನ್ನೂ ಧೋನಿಯೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಧೋನಿಯ ಸ್ಥಾನ ತುಂಬಲು ಯಾವ ಆಟಗಾರನಿಗೂ ಸಾಧ್ಯವಿಲ್ಲ. ಪಂತ್ ಓರ್ವ ಪ್ರತಿಭಾವಂತ ಕ್ರಿಕೆಟಿಗ. ಅವರನ್ನು ಧೋನಿಯೊಂದಿಗೆ ಹೋಲಿಕೆ ಮಾಡುವ ಮೂಲಕ ಒತ್ತಡಕ್ಕೆ ಸಿಲುಕಿಸಬಾರದು. ಅವರಿಗೆ ಖಂಡಿತವಾಗಿಯೂ ಕಾಲ ಕೂಡಿಬರಲಿದೆ’’ ಎಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕಪಿಲ್ದೇವ್ ಹೇಳಿದ್ದಾರೆ.
Next Story