ಧೋನಿ ಚೆನ್ನೈ ಪರ ಮುಂದಿನ ಪಂದ್ಯ ಆಡಲಿದ್ದಾರೆ
ಸುರೇಶ್ ರೈನಾ ವಿಶ್ವಾಸ
ಹೈದರಾಬಾದ್, ಎ.18: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಬುಧವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ ಎಂದು ಎಡಗೈ ದಾಂಡಿಗ ಸುರೇಶ್ ರೈನಾ ವಿಶ್ವಾಸ ವ್ಯಕ್ತಪಡಿಸಿದರು.
ಧೋನಿ ಬೆನ್ನುನೋವಿನಿಂದಾಗಿ ಹೈದರಾಬಾದ್ ವಿರುದ್ಧ ಪಂದ್ಯದಿಂದ ಹೊರಗುಳಿದಿದ್ದರು. ಹೀಗಾಗಿ ಸುರೇಶ್ ರೈನಾ ಹೆಗಲಿಗೆ ನಾಯಕತ್ವ ಜವಾಬ್ದಾರಿ ವರ್ಗಾವಣೆಯಾಗಿತ್ತು.
‘‘ಅವರು(ಧೋನಿ) ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಮುಂದಿನ ಪಂದ್ಯದಲ್ಲಿ ಸಂಪೂರ್ಣ ಫಿಟ್ ಆಗುವ ಸಾಧ್ಯತೆಯಿದೆ’’ ಎಂದು ಪಂದ್ಯ ಬಳಿಕ ಸುದ್ದಿಗಾರರಿಗೆ
ರೈನಾ ತಿಳಿಸಿದರು. ಧೋನಿ ಅನುಪಸ್ಥಿತಿಯಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಮಾಡಿದ್ದ ಚೆನ್ನೈ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 132 ರನ್ ಗಳಿಸಿತ್ತು. ಇದಕ್ಕೆ ದಿಟ್ಟ ಉತ್ತರ ನೀಡಿದ ಆತಿಥೇಯ ಹೈದರಾಬಾದ್ 19 ಎಸೆತಗಳು ಬಾಕಿ ಇರುವಾಗಲೇ ಜಯ ದಾಖಲಿಸಿತು.
ಧೋನಿ ಚೆನ್ನೈ ಪರ ಮುಂದಿನ ಪಂದ್ಯ ಆಡಲಿದ್ದಾರೆ
Next Story