ಮಾಜಿ ಕ್ರಿಕೆಟಿಗ ಪ್ರವೀಣ್ಕುಮಾರ್ ವಿರುದ್ಧ ಹಲ್ಲೆಗೆದ ಆರೋಪ
ಹೊಸದಿಲ್ಲಿ, ಡಿ.15: ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ವಿರುದ್ಧ ನೆರೆ ಮನೆಯವರಿಗೆ ಹಲ್ಲೆ ಗೈದ ಆರೋಪ ಕೇಳಿಬಂದಿದೆ. ಪ್ರವೀಣ್ ತನ್ನ ಹಾಗೂ ತನ್ನ 7 ವರ್ಷದ ಮಗನಿಗೆ ಹಲ್ಲೆ ನಡೆಸಿದ್ದಾಗಿ ದೀಪಕ್ ಶರ್ಮಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ‘‘ಮಧ್ಯಾಹ್ನ 3 ಗಂಟೆಗೆ ನಾನು ನನ್ನ ಮಗನೊಂದಿಗೆ ಬಸ್ಸ್ಟಾಪ್ನಲ್ಲಿ ನಿಂತಿದ್ದೆ. ಅಲ್ಲಿಗೆ ಬಂದ ಪ್ರವೀಣ್ ಕಾರಿನಿಂದ ಇಳಿದು ಮೊದಲಿಗೆ ಬಸ್ ಚಾಲಕನಿಗೆ ಬಳಿಕ ನನಗೆ ನಿಂದಿಸಲಾರಂಭಿಸಿದರು. ಆ ನಂತರ ನನಗೆ ಹಲ್ಲೆ ಮಾಡಿ ಕೈಗೆ ಗಾಯ ಮಾಡಿದ್ದಾರೆ. ನನ್ನ ಮಗನನ್ನು ತಳ್ಳಿದ ಕಾರಣ ಆತನ ಬೆನ್ನಿಗೆ ಗಾಯವಾಗಿದೆ. ಇದೀಗ ಪೊಲೀಸರು ರಾಜಿ ಮಾಡಿಕೊಳ್ಳುವಂತೆ ನನಗೆ ಒತ್ತಡ ಹೇರುತ್ತಿದ್ದಾರೆ ‘‘ಎಂದು ದೀಪಕ್ ಹೇಳಿದ್ದಾರೆ. ‘‘ಇಬ್ಬರು ನೆರೆಹೊರೆಯವರು. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ಹೇಳಿಕೆಯನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ವೈದ್ಯಕೀಯ ಪ್ರಕ್ರಿಯೆ ನಡೆಯುತ್ತಿದೆ’’ ಎಂದು ಪೊಲೀಸ್ ಅಧೀಕ್ಷಕ(ನಗರ) ಅಖಿಲೇಶ್ ನಾರಾಯಣ್ ಹೇಳಿದ್ದಾರೆ. ಪ್ರವೀಣ್ ಕೆಟ್ಟ ಕಾರಣಕ್ಕೆ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. 2008ರಲ್ಲಿ ಮೀರತ್ನಲ್ಲಿ ರಸ್ತೆ ಬದಿಯಲ್ಲಿ ವೈದ್ಯರೊಂದಿಗೆ ಜಗಳವಾಡಿದ್ದರು. 2011ರಲ್ಲಿ ಭಾರತ ತಂಡ ವಿಂಡೀಸ್ ಪ್ರವಾಸ್ ಕೈಗೊಂಡಿದ್ದಾಗ ಅಲ್ಲಿನ ಪ್ರೇಕ್ಷಕರೊಂದಿಗೆ ವಾಕ್ಸಮರ ನಡೆಸಿದ್ದರು.