“ಭಾರತ ಕ್ರಿಕೆಟ್ ತಂಡದಲ್ಲಿ ಮುಸ್ಲಿಮರು ಇದ್ದಾರಾ” ಎಂಬ ಸಂಜೀವ್ ಭಟ್ ಪ್ರಶ್ನೆಗೆ ಹರ್ಭಜನ್ ರ ದೂಸ್ರಾ !
ಹೊಸದಿಲ್ಲಿ,ಅ.24 : "ಭಾರತೀಯ ಕ್ರಿಕೆಟ್ ತಂಡದಲ್ಲಿ ಹಾಲಿ ಯಾವುದಾದರೂ ಮುಸ್ಲಿಂ ಆಟಗಾರರಿದ್ದಾರೆಯೇ ? ಮುಸ್ಲಿಮರು ಕ್ರಿಕೆಟ್ ಆಡುವುದನ್ನು ನಿಲ್ಲಿಸಿದರೇ ?'' ಎಂದು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಬಿಸಿಸಿಐ ಅನ್ನು ಟ್ವೀಟ್ ಮೂಲಕ ಪ್ರಶ್ನಿಸಿದ್ದರೆ ಅದಕ್ಕೆ ಭಾರತೀಯ ತಂಡದ ಸ್ಪಿನ್ನರ್ ಹರ್ಭಜನ್ ಸಿಂಗ್ ತಕ್ಕ ಪ್ರತ್ಯುತ್ತರ ನೀಡಿ ಭಾರತಕ್ಕೆ ಆಟವಾಡುವ ಪ್ರತಿಯೊಬ್ಬ ಕ್ರಿಕೆಟಿಗ 'ಹಿಂದುಸ್ತಾನಿ' ಎಂದು ಬರೆದಿದ್ದಾರೆ.
"ಆಟಗಾರರ ಜಾತಿ, ಧರ್ಮಗಳ ವಿಷಯ ಎತ್ತಬಾರದು, ಹಿಂದು, ಮುಸ್ಲಿಂ, ಸಿಖ್, ಕ್ರೈಸ್ತರೆಲ್ಲರೂ ಸಹೋದರರಂತೆ,'' ಎಂದೂ ಹರ್ಭಜನ್ ಟ್ವೀಟ್ ಮಾಡಿದ್ದಾರೆ.
ಭಾರತ-ನ್ಯೂಜಿಲೆಂಡ್ ವಿರುದ್ಧದ ಟಿ-ಟ್ವೆಂಟ್ ಸರಣಿಗೆ ಹಾಗೂ ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ಬಿಸಿಸಿಐ ಈಗಾಗಲೇ ತಂಡಗಳನ್ನು ಘೋಷಿಸಿದೆ. ಹೈದರಾಬಾದ್ ಮೂಲದ ಬೌಲರ್ ಮುಹಮ್ಮದ್ ಸಿರಾಜ್ ಅವರು ಟಿ-20 ಪಂದ್ಯ ಆಡಲಿರುವ ತಂಡಕ್ಕೆ ಆಯ್ಕೆಯಾಗಿದ್ದರೆ ಟೆಸ್ಟ್ ತಂಡದಲ್ಲಿ ಮುಹಮ್ಮದ್ ಶಮಿ ಸ್ಥಾನ ಪಡೆದಿದ್ದಾರೆ.
Next Story