ರಾಜಸ್ಥಾನದ ಅಧ್ಯಾದೇಶದ ವಿರುದ್ಧ ಹೈಕೋರ್ಟ್ ಗೆ : ಕಾಂಗ್ರೆಸ್
ಜೈಪುರ, ಅ. 25: ಕ್ರಿಮಿನಲ್ ಕಾನೂನು (ರಾಜಸ್ಥಾನ ತಿದ್ದುಪಡಿ) ಅಧ್ಯಾದೇಶದ ವಿರುದ್ಧ ತಾನು ಉಚ್ಚ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಕಾಂಗ್ರೆಸ್ ಬುಧವಾರ ಹೇಳಿದೆ.
ಅಕ್ರಮ ಹಾಗೂ ಅಸಾಂವಿಧಾನಿಕವಾಗಿರುವ ಈ ಅಧ್ಯಾದೇಶ ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಲು ನಾವು ಯೋಚಿಸುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್ ಹೇಳಿದ್ದಾರೆ.
ಬಿಜೆಪಿ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಭ್ರಷ್ಟರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಭ್ರಷ್ಟ ವ್ಯಕ್ತಿಗಳ ರಕ್ಷಣೆಗೆ ಪ್ರಯತ್ನಿಸಲು ಯಾರು ಬಲವಂತ ಮಾಡುತ್ತಿದ್ದಾರೆ ಎಂಬುದನ್ನು ಮುಖ್ಯಮಂತ್ರಿ ಅವರು ಬಹಿರಂಗಗೊಳಿಸಲಿ ಎಂದು ಸಚಿನ್ ಪೈಲೆಟ್ ಆಗ್ರಹಿಸಿದರು.
Next Story