ವಿಮಾನದ ಪ್ರಯಾಣಿಕರನ್ನು ಕಾರಲ್ಲಿ ಕಳಿಸಿದ ಪೈಲಟ್!
ಆತನಿಗೆ ಬೇರೆ ದಾರಿಯೂ ಇರಲಿಲ್ಲ
ಹೊಸದಿಲ್ಲಿ, ನ.10: ಕರ್ತವ್ಯದ ಸಮಯ ಮುಗಿಯಿತೆಂದು ಪೈಲಟ್ ಒಬ್ಬ ವಿಮಾನ ಟೇಕ್ ಆಫ್ ಮಾಡಲು ನಿರಾಕರಿಸಿದ್ದರಿಂದ ಸುಮಾರು 40 ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ ಘಟನೆ ಇಲ್ಲಿನ ಸಂಗನೇರ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಕೆಲ ಪ್ರಯಾಣಿಕರನ್ನು ಕಾರಿನ ಮೂಲಕ ದಿಲ್ಲಿಗೆ ಕರೆದೊಯ್ಯಲಾಯಿತು ಹಾಗು ಕೆಲವರಿಗೆ ಹೋಟೆಲ್ ನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಯಿತು. ಕೆಲವರು ಮರುದಿನ ಬೆಳಗ್ಗೆ ವಿಮಾನದಲ್ಲಿ ಪ್ರಯಾಣಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಪೈಲಟ್ ನ ಕರ್ತವ್ಯದ ಸಮಯ ಮುಗಿದಿತ್ತು. ಆದ್ದರಿಂದ ಆತ ವಿಮಾನವನ್ನು ಚಲಾಯಿಸಿಲ್ಲ” ಎಂದು ಸಂಗನೇರ್ ವಿಮಾನ ನಿಲ್ದಾಣದ ನಿರ್ದೇಶಕ ಜೆ.ಎಸ್. ಬಲ್ಹಾರ ಹೇಳಿದ್ದಾರೆ.
ನಾಗರಿಕ ವಿಮಾನಯಾನ ನಿರ್ದೇಶನಾಯದ ನಿಯಮದಂತೆ ಕೆಲ ಸುರಕ್ಷತಾ ಕಾರಣಗಳಿಂದ ಪೈಲಟ್ ಕರ್ತವ್ಯದ ಸಮಯವನ್ನು ಮೀರಬಾರದು ಎಂದವರು ಹೇಳಿದ್ದಾರೆ.
Next Story