ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ದರೋಡೆಕೋರರು
ಚೆನ್ನೈ, ಡಿ. 12: ಕೊಲತ್ತೂರಿನಲ್ಲಿ ದರೋಡೆ ನಡೆಸಿದ ಆರೋಪಿಗಳನ್ನು ರಾಜಸ್ಥಾನದಲ್ಲಿ ಹಿಡಿಯಲು ಪ್ರಯತ್ನಿಸಿದ ಸಂದರ್ಭ ಮಧುರಾವೋಯಲ್ ಕಾನೂನು ಹಾಗೂ ಸುವ್ಯವಸ್ಥೆ ಇನ್ಸ್ಪೆಕ್ಟರ್ ಎಸ್. ಪೆರಿಯಪಂಡಿಯವರನ್ನು ಗುಂಡು ಹಾರಿಸಿ ಹತ್ಯೆಗೈಯಲಾಗಿದೆ.
ರಾಜಸ್ಥಾನದ ಪಾಲಿ ಜೆಲ್ಲೆಯ ನಾಥುರಾಂ ಹಾಗೂ ಜೋಧಪುರದ ಆತನ ಸಹಚರ ಚೌಧುರಿ ಕೊಲತ್ತೂರಿನಲ್ಲಿ ಗಿರವಿ ಅಂಗಡಿ ಸೀಲಿಂಗ್ ಅನ್ನು ಡ್ರಿಲ್ ಉಪಯೋಗಿಸಿ ಕೊರೆದು ಮೌಲ್ಯಯುತ ವಸ್ತುಗಳನ್ನು ದರೋಡೆಗೈದಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಾಜಸ್ತಾನಕ್ಕೆ ತೆರಳಿತ್ತು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ತಂಡ ಬುಧವಾರ ಬೆಳಗ್ಗೆ ಬಾಲಿ ಜಿಲ್ಲೆಯ ಜೈಥರಾನ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಮ್ಪುರ ಕಾಲನ್ ಗ್ರಾಮದಲ್ಲಿರುವ ಗೋದಾಮಿಗೆ ತೆರಳಿತ್ತು.
ಎಸ್. ಪೆರಿಯಪಂಡಿ ಹಾಗೂ ತಂಡ ಆರೋಪಿಗಳನ್ನು ಬಂಧಿಸಲು ಯತ್ನಿಸಿದಾಗ ಆರೋಪಿಗಳು ಗುಂಡು ಹಾರಿಸಿದರು. ಈ ಗುಂಡಿಗೆ ಸಿಲುಕಿ ಎಸ್. ಪೆರಿಯಪಂಡಿ ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಇನ್ಸ್ಪೆಕ್ಟರ್ ಟಿ.ಎಂ. ಮುನಿಶೇಖರ್ ಗಾಯಗೊಂಡರು.
Next Story