ಕೇರಳ: ಹೊಟೇಲ್, ಮನೆಗಳ ಮೇಲೆ ಬಾಂಬ್ ದಾಳಿ
ಕಲ್ಲಿಕೋಟೆ, ಎ.18: ಮಂಗಳವಾರ ರಾತ್ರಿ ಪೆರಾಂಬ್ರದಲ್ಲಿ ನಾಲ್ಕು ಮನೆಗಳು ಹಾಗೂ ಹೊಟೇಲ್ ಒಂದಕ್ಕೆ ಬಾಂಬೆಸೆಯಲಾಗಿದೆ. ಸಿಪಿಎಂ,ಶಿವಸೇನೆ ಕಾರ್ಯಕರ್ತರ ಮನೆಗಳಿಗೆ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.
ವಿಷುಕನ್ನಿಯಂದು ಪೆರಾಂಬ್ರದಲ್ಲಿ ನಡೆದ ವಿವಾದ ಬಾಂಬೆಸೆತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ನಡೆಸುತ್ತಿದ್ದಾರೆ
Next Story