ಉ.ಪ್ರದೇಶ: ಅಮಿತ್ ಶಾ ಸಭೆಯ ಸ್ಥಳದಲ್ಲಿ ಬೆಂಕಿ
ರಾಯಬರೇಲಿ.ಎ.21: ಶನಿವಾರ ಇಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪಾಲ್ಗೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸಭಿಕರು ಆತಂಕಗೊಳ್ಳುವಂತಾಗಿತ್ತು.
ಮಾಧ್ಯಮ ಪ್ರತಿನಿಧಿಗಳಿಗಾಗಿ ಏರ್ಪಡಿಸಿದ್ದ ಪ್ರತ್ಯೇಕ ಸ್ಥಳದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಉಂಟಾಗಿದ್ದ ಬೆಂಕಿಯನ್ನು ಕೆಲವೇ ಸಮಯದಲ್ಲಿ ನಂದಿಸಲಾಯಿತು.
ಘಟನೆಯ ಸಂದರ್ಭ ಶಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ವೇದಿಕೆಯಲ್ಲಿದ್ದು,ರಾಜ್ಯ ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ ಪಾಂಡೆ ಅವರು ಭಾಷಣ ಮಾಡುತ್ತಿದ್ದರು.
ಬೆಂಕಿಯಿಂದಾಗಿ ಕಾರ್ಯಕ್ರಮವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.
Next Story