ಬಿಜೆಪಿ ವಿಶ್ವಾಸಮತವನ್ನು ಗೆಲ್ಲುತ್ತದೆ : ಜಾವಡೇಕರ್ ವಿಶ್ವಾಸ
ಹೊಸದಿಲ್ಲಿ,ಮೇ 18: ಬಿ.ಎಸ್.ಯಡಿಯೂರಪ್ಪ ಸರಕಾರವು ಶನಿವಾರ ರಾಜ್ಯ ವಿಧಾಸಭೆಯಲ್ಲಿ ವಿಶ್ವಾಸಮತವನ್ನು ಗೆಲ್ಲಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿ ಕರ್ನಾಟಕದಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿಯಾಗಿದ್ದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಶುಕ್ರವಾರ ಟ್ವೀಟಿಸಿದ್ದಾರೆ.
ಶನಿವಾರ ಸಂಜೆ ನಾಲ್ಕು ಗಂಟೆಗೆ ಸದನದಲ್ಲಿ ಯಡಿಯೂರಪ್ಪ ಸರಕಾರದ ಬಹುಮತವನ್ನು ಸಾಬೀತುಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ ಬಳಿಕ ಜಾವಡೇಕರ್ ಅವರ ಈ ಟ್ವೀಟ್ ಹೊರಬಿದ್ದಿದೆ.
Next Story