ಉತ್ತಮ ಬೆಳೆಗಾಗಿ ರೈತರು ಮಂತ್ರ ಪಠಿಸುವ ಯೋಜನೆಗೆ ಚಾಲನೆ ನೀಡಿದ ಗೋವಾ ಕೃಷಿ ಸಚಿವ!
ಹೊಸದಿಲ್ಲಿ, ಜು.4: ಉತ್ತಮ ಬೆಳೆಗಾಗಿ ವೈದಿಕ ಶ್ಲೋಕಗಳನ್ನು ಪಠಿಸುವ ಯೋಜನೆಯೊಂದನ್ನು ಗೋವಾ ಕೃಷಿ ಸಚಿವ ವಿಜಯ್ ಸರ್ದೇಸಾಯಿ ಅನಾವರಣಗೊಳಿಸಿದ್ದಾರೆ. ದಿನವೊಂದಕ್ಕೆ 20 ನಿಮಿಷಗಳ ಕಾಲ ರೈತರು ಧ್ಯಾನ ನಡೆಸಿ, 'ಓಂ ರುಂ ಜುಂ ಸಾಹ್' ಎಂದು ಪಠಿಸುವ ಮೂಲಕ 'ಕಾಸ್ಮಿಕ್ ಎನರ್ಜಿ'ಯನ್ನು ಪಡೆಯುವ ವಿಧಾನವನ್ನು ಅವರು ಬೆಂಬಲಿಸಿದ್ದಾರೆ.
'ಶಿವ್ ಯೋಗ್ ಕಾಸ್ಮಿಕ್ ಫಾರ್ಮಿಂಗ್' ಎಂಬ ಹೆಸರಿನ ಈ ಯೋಜನೆಯನ್ನು ಮಾಜಿ ಕೆಮಿಕಲ್ ಇಂಜಿನಿಯರ್, ಧಾರ್ಮಿಕ ನಾಯಕ ಅವಧೂತ್ ಶಿವಾನಂದ ವಿನ್ಯಾಸಗೊಳಿಸಿದ್ದಾರೆ. ವಿಜಯ್ ಸರ್ದೇಸಾಯಿಯವರ ಪತ್ನಿ ಉಷಾ ಕೂಡ ಅವಧೂತ್ ಶಿವಾನಂದರ ಶಿವ ಯೋಗ್ ಫೌಂಡೇಶನ್ ನ ಅನುಯಾಯಿಯಾಗಿದ್ದಾರೆ.
"ಇದು ಯಾವುದೇ ಹಣವನ್ನು ಒಳಗೊಂಡಿಲ್ಲ ಹಾಗು ಒಬ್ಬ ಕೃಷಿ ಸಚಿವನಾಗಿ ಕೃಷಿಯ ಬಗೆಗಿನ ಆಸಕ್ತಿಯನ್ನು ಹೆಚ್ಚಿಸುವ ಸಲುವಾಗಿ ನಾನು ಪ್ರತಿಯೊಂದು ವಿಧಾನವನ್ನು ಕಂಡುಹಿಡಿಯುತ್ತೇನೆ" ಎಂದವರು ಪಣಜಿಯಲ್ಲಿ ಯೋಜನೆಗೆ ಚಾಲನೆ ನೀಡಿದ ನಂತರ ವಿಜಯ್ ಸರ್ದೇಸಾಯಿ ಹೇಳಿದರು.
Launched transplanting of Ratnagiri 7 RedRice at #ShivYogKrishi’s maiden #CosmicFarming rice cultivation @#Fatorda today .Not tokenism but increasing fallow uncultivated area from 40,700 ha(27600 ha Kharif & 13100 ha Rabi) under rice @Goa is the real challenge ! #FarmingChallenge pic.twitter.com/EoKcTS1h0q
— Vijai Sardesai (@VijaiSardesai) July 3, 2018