ಛತ್ತೀಸ್ಗಡ: ಕಾರ್ಮಿಕರಿಗಾಗಿ ‘ಟಿಫಿನ್ ಯೋಜನೆ’ಗೆ ಚಾಲನೆ
ರಾಯಪುರ,ಆ.11: ರಾಜ್ಯದಲ್ಲಿಯ ಕಾರ್ಮಿಕರಿಗಾಗಿ ‘ನರೇಗಾ ಮಜದೂರ್ ಟಿಫಿನ್ ಯೋಜನೆ’ಗೆ ಮುಖ್ಯಮಂತ್ರಿ ರಮಣ ಸಿಂಗ್ ಅವರು ಶುಕ್ರವಾರ ಇಲ್ಲಿ ಚಾಲನೆ ನೀಡಿದರು.
ಯೋಜನೆಯಡಿ 10 ಲಕ್ಷಕ್ಕೂ ಅಧಿಕ ಕಾರ್ಮಿಕರಿಗೆ ತಿನಿಸನ್ನು ಒದಗಿಸಲಾಗುವುದು ಎಂದು ಹೇಳಿದ ಅವರು,ಕಾರ್ಮಿಕರಿಗಾಗಿ ಸರಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು,ಟಿಫಿನ್ ಯೋಜನೆ ಅವುಗಳಲ್ಲೊಂದಾಗಿದೆ. ನರೇಗಾ ಕಾರ್ಯಕ್ರಮದಡಿ ಈ ಯೋಜನೆಯಲ್ಲಿ ಪ್ರತಿ ತಿಂಗಳಿಗೆ ಸುಮಾರು 10,80,000 ಕಾರ್ಮಿಕರಿಗೆ ಆರೋಗ್ಯಕರ ಆಹಾರವನ್ನು ನೀಡಲಾಗುವುದು ಎಂದರು. ತನ್ನ ಸರಕಾರವು ಬಡ ಶೋಷಿತರ ಬದುಕುಗಳನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿದೆ ಮತ್ತು ಗ್ರಾಮಸ್ಥರ ಬದುಕನ್ನು ಸುಧಾರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದರು. ಈ ಸಂದರ್ಭದಲ್ಲಿ ಕೆಲವು ಕಾರ್ಮಿಕರಿಗೆ ಟಿಫಿನ್ ಬಾಕ್ಸ್ಗಳನ್ನೂ ಅವರು ವಿತರಿಸಿದರು.
Next Story