ಕುಪ್ವಾರದಲ್ಲಿ ಮೇಘ ಸ್ಫೋಟ: 1 ಸಾವು
ಶ್ರೀನಗರ, ಆ. 15: ಜಮ್ಮು ಹಾಗೂ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕರ್ನಾಹ್ ಪ್ರದೇಶದಲ್ಲಿ ಮೇಘ ಸ್ಫೋಟ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟಿದ್ದಾರೆ. ಹಲವು ಕಟ್ಟಡ ಹಾಗೂ ಅಂಗಡಿಗಳಿಗೆ ಹಾನಿ ಉಂಟಾಗಿವೆ. ಮೇಘ ಸ್ಫೋಟದಿಂದ ಕರ್ನಾಹ್ನ ಕುಚಿ ಬಾನ್ನಲ್ಲಿ ಮಂಗಳವಾರ ಭಾರೀ ಮಳೆ ಸುರಿಯಿತು. ನೆರೆಗೆ ಜಮ್ಮುವಿನ ನಿವಾಸಿ ಸತ್ಪಾಲ್ ಸಿಂಗ್ ಕೊಚ್ಚಿಕೊಂಡು ಹೋಗಿದ್ದಾರೆ. ಸಂತ್ಪಾಲ್ ಸಿಂಗ್ನ ದೇಹ ಅನಂತರ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ನೆರೆಯಿಂದ ಉಂಟಾದ ಹಾನಿ ಕೇಳಿ 80 ವರ್ಷದ ಮಂಗ್ಟಾ ಅವಾನ್ ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ಸರಕಾರಿ ಕಟ್ಟಡ, ಮೂರು ಮನೆಗಳು ಹಾಗೂ 10 ಅಂಗಡಿಗಳು ಸಂಪೂರ್ಣವಾಗಿ ನಾಶವಾಗಿವೆ. 13 ಮನೆಗಳು, 5 ಸರಕಾರಿ ಕಟ್ಟಡಗಳು ಹಾಗೂ 50 ಅಂಗಡಿಗಳಿಗೆ ಭಾಗಶಃ ಹಾನಿ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story