ರಾಹುಲ್ ಗಾಂಧಿಯನ್ನು ‘ಶಿವಭಕ್ತ’ನೆಂದು ಬಿಂಬಿಸುತ್ತಿರುವ ಪೋಸ್ಟರ್ಗಳು ಪ್ರತ್ಯಕ್ಷ
ಗೋರಖ್ಪುರ, ಆ.31: ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಾಧ್ಯಕ್ಷ ರಾಹುಲ್ ಗಾಂಧಿಯವರನ್ನು ‘ಶಿವಭಕ್ತ ’ಎಂದು ಬಣ್ಣಿಸುವ ಪೋಸ್ಟರ್ಗಳನ್ನು ಪ್ರದರ್ಶಿಸಿದ್ದಾರೆ. ಅವರನ್ನು ’ಪಂಡಿತ ರಾಹುಲ್ ಗಾಂಧಿ’ ಮತ್ತು ‘ಜನಿವಾರಧಾರಿ’ ಎಂದೂ ಬಣ್ಣಿಸಲಾಗಿದೆ.
ರಾಹುಲ್ ಆ.31ರಿಂದ 12 ದಿನಗಳ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಆರಂಭಿಸಲಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ ಬಳಿಕ ಗುರುವಾರ ಈ ಪೋಸ್ಟರ್ಗಳು ಕಾಣಿಸಿಕೊಂಡಿವೆ. ಆದರೆ ರಾಹುಲ್ ಅವರ ಯಾತ್ರೆಯ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಯಾತ್ರೆಯನ್ನು ಕೈಗೊಳ್ಳುವ ರಾಹುಲ್ ನಿರ್ಧಾರದಿಂದ ಇಡೀ ದೇಶವೇ ಸಂತಸಗೊಂಡಿದೆ. ತನ್ನ ಆಧ್ಯಾತ್ಮಿಕ ಪ್ರವಾಸದಲ್ಲಿ ಅವರು ‘ಸಾಧನೆ ’ಯನ್ನು ಮಾಡಲಿದ್ದಾರೆ ಮತ್ತು ದೇಶಕ್ಕಾಗಿ ಪ್ರಾರ್ಥಿಸಲಿದ್ದಾರೆ ಎಂದು ಗೋರಖ್ಪುರದ ಬೀದಿಗಳಲ್ಲಿ ಪೋಸ್ಟರ್ಗಳೊಂದಿಗೆ ಸಾಗುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೇನ್ ತಿಳಿಸಿದರು.