ಶ್ರೀಮಂತ ಕಾರ್ಪೊರೇಟ್ಗಳಿಗೆ ಹೆಚ್ಚು ಸಾಲನೀಡಲು ಆರ್ಬಿಐ ಮೇಲೆ ಸರಕಾರದ ಒತ್ತಡ: ಯೆಚೂರಿ
ಹೊಸದಿಲ್ಲಿ,ನ.1: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರವು ಆರ್ಬಿಐ ಕಾರ್ಯನಿರ್ವಹಣೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಮತ್ತು ಶ್ರೀಮಂತ ಕಾರ್ಪೊರೇಟ್ ಸಂಸ್ಥೆಗಳಿಗೆ ಹೆಚ್ಚಿನ ಸಾಲ ನೀಡುವಂತೆ ಅದರ ಮೇಲೆ ಒತ್ತಡ ಹೇರುತ್ತಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಗುರುವಾರ ಇಲ್ಲಿ ಆರೋಪಿಸಿದರು.
ಶ್ರೀಮಂತ ಸುಸ್ತಿದಾರರ ಮೂರು ಲ.ಕೋ.ರೂ.ಗೂ ಅಧಿಕ ಬಾಕಿಯನ್ನು ಸರಕಾರವು ಈಗಾಗಲೇ ತೊಡೆದುಹಾಕಿದೆ ಮತ್ತು ಅವರಿಗೆ ಇನ್ನಷ್ಟು ಸಾಲ ನೀಡುವಂತೆ ಆರ್ಬಿಐನ್ನು ಒತ್ತಾಯಿಸುತ್ತಿದೆ ಎಂದು ಆರೋಪಿಸಿದ ಅವರು,ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಕೇವಲ ಶ್ರೀಮಂತರು ಹಾಗೂ ಸರಕಾರದ ಆಪ್ತರಿಗೆ ನೆರವಾಗುತ್ತಿದೆ ಎಂದು ಹೇಳಿದರು.
Next Story