ಅಲೋಕ್ ವರ್ಮಾ,ಅಸ್ತಾನಾರಿಂದ ಸಿವಿಸಿ ಕೆ.ವಿ.ಚೌಧರಿ ಭೇಟಿ
ಹೊಸದಿಲ್ಲಿ,ನ.8: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರು ಗುರುವಾರ ಕೇಂದ್ರ ಜಾಗ್ರತ ಆಯುಕ್ತ ಕೆ.ವಿ.ಚೌಧರಿ ಅವರನ್ನು ಭೇಟಿಯಾಗಿದ್ದು,ತಮ್ಮ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಕುರಿತಂತೆ ನಡೆಯುತ್ತಿರುವ ತನಿಖೆಯ ಕುರಿತು ಅವರಿಬ್ಬರೂ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿರಬಹುದು ಎಂದು ಹೇಳಲಾಗಿದೆ.
ಅಪರಾಹ್ನ ಒಂದು ಗಂಟೆಯ ಸುಮಾರಿಗೆ ಕೇಂದ್ರ ಜಾಗೃತ ಆಯೋಗದ ಕಚೇರಿಯನ್ನು ತಲುಪಿದ್ದ ವರ್ಮಾ ಮತ್ತು ಅಸ್ತಾನಾ ಸುಮಾರು ಒಂದು ಗಂಟೆ ಕಾಲ ಅಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದರು.
ಚೌಧರಿ ಜೊತೆ ಅವರು ಜಾಗ್ರತ ಆಯುಕ್ತ ಶರದ್ ಕುಮಾರ ಅವರನ್ನೂ ಭೇಟಿಯಾಗಿದ್ದರು ಎಂದು ತಿಳಿಸಿದ ಅಧಿಕಾರಿಗಳು ಯಾವುದೇ ವಿವರಗಳನ್ನು ನೀಡಲಿಲ್ಲ.
Next Story