ಟಿಆರ್ಎಸ್ ಕಾರ್ಯಾಧ್ಯಕ್ಷರಾಗಿ ನಾಳೆ ಕೆಟಿಆರ್ ಅಧಿಕಾರ ಸ್ವೀಕಾರ
ಹೈದರಾಬಾದ್, ಡಿ.17: ಟಿಆರ್ಎಸ್ ವರಿಷ್ಠ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್(ಕೆಸಿಆರ್)ಅವರ ಪುತ್ರ ಕೆ.ಟಿ.ರಾಮರಾವ್ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿ ಸೋಮವಾರ ಇಲ್ಲಿಯ ತೆಲಂಗಾಣ ಭವನದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ಕೆಟಿಆರ್ ಎಂದೇ ಜನಪ್ರಿಯರಾಗಿರುವ ರಾವ್ ಸಿರ್ಸಿಲ್ಲಾ ಶಾಸಕರಾಗಿದ್ದಾರೆ.
ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸುವ ಕ್ರಮದ ಅಂಗವಾಗಿ ರಾವ್ ಅವರು ಶೀಘ್ರವೇ ಜಿಲ್ಲೆಗಳಿಗೆ ಭೇಟಿ ನೀಡಿ ಟಿಆರ್ಎಸ್ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿದವು.
ಕೆಸಿಆರ್ ಅವರು ಶುಕ್ರವಾರ ಟಿಆರ್ಎಸ್ ಕಾರ್ಯಾಧ್ಯಕ್ಷರಾಗಿ ರಾವ್ ನೇಮಕವನ್ನು ಪ್ರಕಟಿಸಿದ್ದರು.
Next Story