ಭಯೋತ್ಪಾದನೆ ವಿರುದ್ಧದ ಯುದ್ಧ ಆರಂಭ: ಆದಿತ್ಯನಾಥ್
ಲಕ್ನೊ, ಫೆ.17: ಕೇಂದ್ರ ಸರಕಾರ ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ನಿರ್ಣಾಯಕ ಯುದ್ಧ ಆರಂಭಿಸಿದ್ದು, ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಯೋಧರ ಬಲಿದಾನ ವ್ಯರ್ಥವಾಗದಂತೆ ನಾವೆಲ್ಲಾ ಒಗ್ಗೂಡಬೇಕಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರಪ್ರದೇಶದ ರಾಜಭವನದಲ್ಲಿ ಆಯೋಜಿಸಲಾಗಿರುವ ತರಕಾರಿ ಮತ್ತು ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಭಯೋತ್ಪಾದನೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಮತ್ತು ಈಗ ಆರಂಭವಾಗಿರುವ ನಿರ್ಣಾಯಕ ಯುದ್ಧದಲ್ಲಿ ದೇಶ ಗೆಲ್ಲುತ್ತದೆ ಮತ್ತು ನಾವು ಭಯೋತ್ಪಾದನೆ ಮತ್ತು ನಕ್ಸಲಿಸಂಗೆ ಅಂತ್ಯ ಹಾಡಲಿದ್ದೇವೆ . ದೇಶ ರಕ್ಷಣೆಗಾಗಿ ಬಲಿದಾನಗೈದಿರುವ ಯೋಧರ ಕುಟುಂಬದ ಸದಸ್ಯರ ಹಿತರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಬದ್ಧವಾಗಿದೆ ಎಂದವರು ಹೇಳಿದರು.
ಶನಿವಾರ ಅಲಹಾಬಾದ್ನಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ರಾಜ್ಯಪಾಲ ರಾಮ ನಾಕ್ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ತೆರಳಿದ್ದೆ. ಬಿಡುವಿಲ್ಲದ ಕಾರ್ಯಕ್ರಮದ ಮಧ್ಯೆಯೂ, ರೈತರ ಮೇಲಿನ ಕಾಳಜಿಯಿಂದ ಫಲಪುಷ್ಪ ಪ್ರದರ್ಶನದಲ್ಲಿ ಪಾಲ್ಗೊಂಡಿರುವುದಾಗಿ ಆದಿತ್ಯನಾಥ್ ಹೇಳಿದರು.