ಭೂಮಾಲಿಕನಿಂದ ದಲಿತ ಯುವಕನ ಹತ್ಯೆ
ಮುಝಫ್ಫರ್ನಗರ,ಮಾ.2: ಇಲ್ಲಿಯ ತಿತಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಲಖಿಯನ್ ಗ್ರಾಮದಲ್ಲಿ 26ರ ಹರೆಯದ ದಲಿತ ಯುವಕನೋರ್ವ ತನ್ನ ಭೂಮಾಲಿಕನಿಂದ ಕೊಲೆಗೀಡಾಗಿದ್ದಾನೆ.
ಹತ ಪೋಪಿನ್ ಶವವು ಹೊಲವೊಂದರಲ್ಲಿ ಪತ್ತೆಯಾಗಿದ್ದು,ಆತನ ಕುತ್ತಿಗೆಯಲ್ಲಿ ಚೂರಿ ಇರಿತದ ಗಾಯಗಳಿವೆ ಎಂದು ಪೊಲೀಸರು ಶನಿವಾರ ತಿಳಿಸಿದರು.
ಭೂಮಾಲಿಕ ಟಿಟು ಶುಕ್ರವಾರ ಪೋಪಿನ್ನನ್ನು ಮನೆಯಿಂದ ಕರೆದೊಯ್ದಿದ್ದ ಮತ್ತು ತಡರಾತ್ರಿಯಾದರೂ ವಾಪಸ್ ಬಂದಿರಲಿಲ್ಲ ಎಂದು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ. ಟಿಟು ಮತ್ತು ಆತನ ಸಹಚರ ರವೀಂದ್ರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು,ಇಬ್ಬರೂ ತಲೆಮರೆಸಿಕೊಂಡಿದ್ದಾರೆ.
ತನ್ಮಧ್ಯೆ ಪೋಪಿನ್ ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದಾರೆ.
Next Story