ನಿರ್ದಿಷ್ಟ ವ್ಯಕ್ತಿಯನ್ನು ಸಿಲುಕಿಸುವಂತೆ ಸಿಬಿಐ ಸೂಚಿಸಿತ್ತು: ಕ್ರಿಶ್ಚಿಯನ್ ಮೈಕಲ್ ಆರೋಪ
ಅಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣ
ಹೊಸದಿಲ್ಲಿ, ಮಾ. 5: ಅಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದಲ್ಲಿ ನಿರ್ದಿಷ್ಟ ವ್ಯಕ್ತಿಯನ್ನು ಸಿಲುಕಿಸುವಂತೆ ಸಿಬಿಐ ಸೂಚಿಸಿತ್ತು. ಒಪ್ಪದಿದ್ದರೆ, ಜೈಲಿನಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಬೆದರಿಕೆ ಒಡ್ಡಿತ್ತು ಎಂದು 3600 ಕೋ. ರೂ.ನ ಅಗಸ್ಟಾ ವೆಸ್ಟ್ಲ್ಯಾಂಡ್ ಕಾಪ್ಟರ್ ಹಗರಣದಲ್ಲಿ ಬಂಧಿತರಾಗಿರುವ ಕ್ರಿಶ್ಚಿಯನ್ ಮೈಕಲ್ ಮಂಗಳವಾರ ದಿಲ್ಲಿ ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ಭಾರತಕ್ಕೆ ಗಡಿಪಾರು ಮಾಡುವ ಮುನ್ನ ಸಿಬಿಐ ತನಗೆ ಈ ಬೆದರಿಕೆ ಒಡ್ಡಿತ್ತು ಎಂದು ಅವರು ತಿಳಿಸಿದ್ದಾರೆ. ಪ್ರತ್ಯೇಕವಾಗಿರುವ ಅತ್ಯುಚ್ಛ ಭದ್ರತೆಯ ಸೆಲ್ಗೆ ವರ್ಗಾಯಿಸುವ ತಿಹಾರ್ ಜೈಲು ಪ್ರಾಧಿಕಾರದ ನಿರ್ಧಾರವನ್ನು ವಿರೋಧಿಸುವ ಸಂದರ್ಭ ನ್ಯಾಯಾಲಯದ ಮುಂದೆ ಮೈಕಲ್ ಅವರ ಪರ ವಕೀಲರು ಈ ಆರೋಪ ಮಾಡಿದರು.
Next Story