ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಪ್ರಧಾನ ಮಂತ್ರಿ ಕುರ್ಚಿ ಮೇಲೆ ಮಾಯಾವತಿ ಕಣ್ಣು …!
ಲಕ್ನೋ, ಮಾ.21: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಬಿಎಸ್ ಪಿ ನಾಯಕಿ ಮಾಯಾವತಿ ಸ್ಪರ್ಧಿಸುವುದಿಲ್ಲ. ಆದರೆ ಪ್ರಧಾನ ಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವುದನ್ನು ಬಹಿರಂಗಪಡಿಸಿದ್ದಾರೆ.
ಲೋಕಸಭೆ ಅಥವಾ ರಾಜ್ಯಸಭೆಯ ಸದಸ್ಯರಲ್ಲದವರು ಪ್ರಧಾನ ಮಂತ್ರಿಯಾದರೆ ಆರು ತಿಂಗಳ ಒಳಗಾಗಿ ಲೋಕಸಭೆ ಅಥವಾ ರಾಜ್ಯಸಭೆಯ ಸದಸ್ಯರಾಗಬೇಕಾಗಿದೆ. ಈ ಕಾರಣದಿಂದಾಗಿ ಪ್ರಧಾನಮಂತ್ರಿಯಾದರೆ ಮಾಯಾವತಿ ರಾಜ್ಯಸಭೆ ಸದಸ್ಯರಾಗುವ ಯೋಜನೆಯಲ್ಲಿದ್ದಾರೆ
1995ರಲ್ಲಿ ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗ ವಿಧಾನ ಸಭೆ ಅಥವಾ ವಿಧಾನ ಪರಿಷತ್ ನ ಸದಸ್ಯರಾಗಿರಲಿಲ್ಲ. ಇದೇ ರೀತಿ ಮಾಯಾವತಿ ಲೆಕ್ಕಾಚಾರದಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನ್ನು ಹೊರಗಿಟ್ಟು ಬಿಎಸ್ಪಿ ಮತ್ತು ಎಸ್ ಪಿ ಮೈತ್ರಿ ಮಾಡಿಕೊಂಡಿದೆ.
Next Story