ಕಾಂಗ್ರೆಸ್ ನ 7ನೇ ಪಟ್ಟಿ ಪ್ರಕಟ: ಯುಪಿಸಿಸಿ ಮುಖ್ಯಸ್ಥ ರಾಜ್ ಬಬ್ಬರ್ ಫತೇಪುರ್ ಸಿಕ್ರಿಯಿಂದ ಸ್ಪರ್ಧೆ
ಲಕ್ನೋ, ಮಾ.23: ಕಾಂಗ್ರೆಸ್ ಪಕ್ಷ ಮುಂಬರುವ ಲೋಕಸಭೆಯ ವಿವಿಧ ಕ್ಷೇತ್ರಗಳಿಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ತಡ ರಾತ್ರಿ ಪ್ರಕಟಿಸಿದ್ದು, ಯುಪಿಸಿಸಿ ಮುಖ್ಯಸ್ಥ ರಾಜ್ ಬಬ್ಬರ್ ಫತೇಪುರ್ ಸಿಕ್ರಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಬಿಎಸ್ಪಿಯ ಮಾಜಿ ಧುರೀಣ ನಸೀಮುದ್ದೀನ್ ಸಿದ್ದಿಕಿ ಬಿಜ್ನೂರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಕವಿ ಇಮ್ರಾನ್ ಪ್ರತಾಪ್ ಗರ್ಗಿ ಅವರು ರಾಜ್ ಬಬ್ಬರ್ ಅವರ ಹಿಂದಿನ ಕ್ಷೇತ್ರ ಮೊರಾದ್ ಬಾದ್ ನಿಂದ ಸ್ಪರ್ಧಿಸಲು ಟಿಕೆಟ್ ಪಡೆದಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಮಿರ್ಜಾಪುರದ ಎಸ್ಪಿಯ ಮಾಜಿ ಸಂಸದ ಬಾಲ ಕುಮಾರ್ ಪಟೇಲ್ ಬಂಡದಿಂದ ಸ್ಪರ್ಧಿಸುತ್ತಿದ್ದಾರೆ. ಪಟ್ಟಿಯಲ್ಲಿರುವ ಇತರ ಹೆಸರುಗಳು ಇಂತಿವೆ. ಹಾಥ್ರಾಸ್ (ಮೀಸಲು) ತ್ರಿಲೋಕಿರಾಮ್ ದಿವಾಕರ್, ಆಗ್ರ (ಮೀಸಲು) ಕ್ಷೇತ್ರದಿಂದ ದಾಯ ತೆರಿಗೆ ಮಾಜಿ ಆಯುಕ್ತೆ ಪ್ರೀತಾ ಹರಿತ್, ಬರೇಲಿಯಿಂದ ಪ್ರವೀಣ್ ಅರೋನ್, ಹಾರ್ದಾಯ್ (ಮೀಸಲು) ವೀರೇಂದ್ರ ಕುಮಾರ್ ವರ್ಮಾ, ಬಂದದ ಬಾನ್ ಕುನ್ವರ್ ಪಟೇಲ್ ಮತ್ತು ಕೌಶಂಬಿ ಯಿಂದ ಗಿರೀಶ್ ಚಂದ್ರ ಸ್ಪರ್ಧಿಸಲಿದ್ದಾರೆ. ಪ್ರೀತಾ ಹರಿತಾ ಆದಾಯ ತೆರಿಗೆಯ ಪ್ರಧಾನ ಆಯುಕ್ತ ಹುದ್ದೆಗೆ ಇತ್ತೀಚೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು.