ಕೇರಳದ ವಯನಾಡ್ನಿಂದ ರಾಹುಲ್ ಸ್ಪರ್ಧೆ?
ದಕ್ಷಿಣ ಭಾರತದ ಚುನಾವಣಾ ಕಣದಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ
ಪತ್ತನಂತಿಟ್ಟ, ಮಾ. 23: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡ್ನಿಂದ ಸ್ಪರ್ಧಿಸುವಂತೆ ಕೆಪಿಸಿಸಿ ಮನವಿ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ.
ರಾಹುಲ್ ಸ್ಪರ್ಧಿಸುವುದಿದ್ದರೆ ತಾನು ಹಿಂದೆ ಸರಿಯುವುದಾಗಿ ಟಿ.ಸಿದ್ದೀಖ್ ಹೇಳಿದ್ದು, ಕೇರಳ ಘಟಕದ ಮನವಿಗೆ ರಾಹುಲ್ ಒಪ್ಪಿಗೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಹೇಳಿದ್ದಾರೆ. ಇದೇ ವೇಳೆ ವಯನಾಡ್ನಿಂದ ರಾಹುಲ್ ಸ್ಪರ್ಧಿಸುವ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
Next Story