ನಾನು ಶಾಪ ನೀಡಿದ್ದರಿಂದ ಹೇಮಂತ್ ಕರ್ಕರೆ ಸತ್ತರು ಎಂದ ಪ್ರಜ್ಞಾ ಸಿಂಗ್!
26/11 ಹೀರೋ, ಹುತಾತ್ಮ ಅಧಿಕಾರಿಯ ಬಗ್ಗೆ ಕೀಳುಮಟ್ಟದ ಹೇಳಿಕೆ
ಭೋಪಾಲ್, ಎ.19: “ನಾನು ಶಾಪ ನೀಡಿದ್ದರಿಂದ ಮುಂಬೈ ಎಟಿಎಸ್ ನ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ತಮ್ಮ ಜೀವ ಕಳೆದುಕೊಂಡರು” ಎಂದು ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ, 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕುರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ನಾನು ಹೇಮಂತ್ ಕರ್ಕರೆಗೆ ಕರೆ ಮಾಡಿ ನನ್ನ ವಿರುದ್ಧ ಸಾಕ್ಷ್ಯವಿಲ್ಲದೇ ಇದ್ದರೆ ನನ್ನನ್ನು ಬಿಟ್ಟು ಬಿಡಲು ಹೇಳಿದೆ. ಆದರೆ ಅವರು ನನ್ನನ್ನು ಬಿಟ್ಟು ಬಿಡುವುದಿಲ್ಲ, ಸಾಕ್ಷ್ಯ ತರುತ್ತೇನೆ ಎಂದಿದ್ದರು. ನೀವು ನಾಶವಾಗಿ ಹೋಗುತ್ತೀರಿ ಎಂದು ನಾನು ಅವರಿಗೆ ಹೇಳಿದ್ದೆ” ಎಂದು ಸಾಧ್ವಿ ಪ್ರಜ್ಞಾ ಹೇಳಿಕೊಂಡಿದ್ದಾರೆ.
26/11 ಮುಂಬೈ ದಾಳಿಯ ವೇಳೆ ಉಗ್ರರ ವಿರುದ್ಧದ ಹೋರಾಟದಲ್ಲಿ ಕರ್ಕರೆ ಹಾಗೂ ಇತರ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿದ್ದರು.
Next Story