ಪ್ರಜ್ಞಾ ಸಿಂಗ್ ದೇಶಭಕ್ತೆ, ಮುಗ್ಧ ಹೆಣ್ಣು ಮಗಳು ಎಂದ ಶಿವರಾಜ್ ಸಿಂಗ್ ಚೌಹಾಣ್
ಹೊಸದಿಲ್ಲಿ, ಎ.22: 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಭೋಪಾಲ್ ನಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ತನ್ನ ವಿವಾದಾತ್ಮಕ ಹೇಳಿಕೆಗಳಿಂದ ಚುನಾವಣಾ ಆಯೋಗದಿಂದ ಎರಡು ನೋಟಿಸ್ಗಳನ್ನು ಪಡೆದಿದ್ದಾರೆ.
ಇದೀಗ ಪ್ರಜ್ಞಾರನ್ನು ಪ್ರಶಂಸಿಸಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, “ಪ್ರಜ್ಞಾ ದೇಶಭಕ್ತಿ ಹೊಂದಿರುವ, ಮುಗ್ಧ ಹೆಣ್ಣುಮಗಳು’’ ಎಂದಿದ್ದಾರೆ.
‘‘ಆಕೆಯ ಮೇಲೆ ಪ್ರಕರಣ ದಾಖಲಿಸಲು ಕಾನೂನನ್ನು ದುರ್ಬಳಕೆ ಮಾಡಲಾಗಿದೆ. ಹಿಂದೂ ಭಯೋತ್ಪಾದಕತೆ ಎಂದು ತಪ್ಪಾಗಿ ಪ್ರಚಾರ ಮಾಡಲಾಗಿತ್ತು. ದಿಗ್ವಿಜಯ ಸಿಂಗ್ ಈ ಆರೋಪದ ಸೂತ್ರಧಾರ ಎನ್ನುವುದು ನನ್ನ ಆರೋಪ. ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾ ಮೇಲೆ ತಪ್ಪು ಆರೋಪ ಹೊರಿಸಲಾಗಿದೆ ಎಂದರು.
Next Story