ಮಾನನಷ್ಟ ಮೊಕದ್ದಮೆ: ಕೇಜ್ರಿವಾಲ್, ಸಿಸೋಡಿಯಾ, ಯೋಗೇಂದ್ರ ವಿರುದ್ಧ ಜಾಮೀನು ರಹಿತ ಬಂಧನಾದೇಶ ರದ್ದು
ಹೊಸದಿಲ್ಲಿ, ಎ. 24: 2013ರಲ್ಲಿ ದಾಖಲಿಸಲಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ನ್ಯಾಯಾಲಯದ ಮುಂದೆ ಹಾಜರಾಗಲು ವಿಫಲವಾದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ಬಂಧನಾದೇಶಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರ ತಡೆ ನೀಡಿದೆ.
ಜಾಮೀನು ರಹಿತ ಬಂಧನಾದೇಶವನ್ನು ರದ್ದುಗೊಳಿಸುವಂತೆ ಮೂವರು ನಾಯಕರ ಪರ ವಕೀಲರು ಮನವಿ ಮಾಡಿದ ಬಳಿಕ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ದಂಡಾಧಿಕಾರಿ ಸಮರ್ ವಿಶಾಲ್ ಈ ಆದೇ ಜಾರಿ ಮಾಡಿದ್ದಾರೆ.
ಮುಖ್ಯ ವಿಷಯವನ್ನು ನ್ಯಾಯಾಲಯ ಎಪ್ರಿಲ್ 29ರಂದು ವಿಚಾರಣೆ ನಡೆಸಲಿದೆ.
Next Story