ಬುರ್ಖಾ ನಿಷೇಧಕ್ಕೆ ಆಗ್ರಹಿಸಿದ ‘ಸಾಮ್ನಾ’ ಸಂಪಾದಕೀಯ: ಅಂತರ ಕಾಯ್ದುಕೊಂಡ ಶಿವಸೇನೆ
ಹೊಸದಿಲ್ಲಿ, ಮೇ 1: ದೇಶದಲ್ಲಿ ಬುರ್ಖಾವನ್ನು ನಿಷೇಧಿಸಬೇಕು ಎಂಬ ‘ಸಾಮ್ನಾ’ದ ಸಂಪಾದಕೀಯದ ಬಗ್ಗೆ ಶಿವಸೇನೆ ದೂರ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹೇಳಿಕೆಯಿಂದ ದೂರ ಸರಿದು ನಿಂತಿದೆ.
“ನಾಯಕರ ಸಭೆಯಲ್ಲಿ ಪ್ರತಿಯೊಂದು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಅಥವಾ ಉದ್ಧವ್ ಠಾಕ್ರೆ ಘೋಷಿಸುತ್ತಾರೆ. ಇಂದಿನ ಸಂಪಾದಕೀಯದ ಬಗ್ಗೆ ಉದ್ಧವ್ ಠಾಕ್ರೆಯವರ ಜೊತೆ ಚರ್ಚಿಸಿಲ್ಲ. ಇದು ಸಂಪಾದಕರ ವೈಯಕ್ತಿಕ ಅಭಿಪ್ರಾಯ” ಎಂದು ಶಿವಸೇನೆ ವಕ್ತಾರ ನೀಲಂ ಗೋರೆ ಹೇಳಿದ್ದಾರೆ.
Next Story