ಇಂದು ಭೀತಿವಾದ ದಿನಾಚರಣೆಗೆ ವಿವಿಗಳಿಗೆ ಯುಜಿಸಿ ಸೂಚನೆ
ಹೊಸದಿಲ್ಲಿ,ಮೇ 20: ಯುವಜನತೆಯನ್ನು ಭಯೋತ್ಪಾದನೆಯಿಂದ ವಿಮುಖಗೊಳಿಸಲು ಮತ್ತು ಅದು ರಾಷ್ಟ್ರೀಯ ಹಿತಾಸಕ್ತಿಗೆ ಹೇಗೆ ಹಾನಿಕಾರಕ ಎನ್ನುವುದನ್ನು ಬಿಂಬಿಸಲು ಮೇ 21ನ್ನು ಭೀತಿವಾದ ವಿರೋಧಿ ದಿನವನ್ನಾಗಿ ಆಚರಿಸುವಂತೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ)ವು ವಿವಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶ ನೀಡಿದೆ.
ಗೃಹ ಸಚಿವಾಲಯದ ನಿರ್ದೇಶದಂತೆ ಭೀತಿವಾದ ವಿರೋಧಿ ದಿನದ ಅಂಗವಾಗಿ ಚರ್ಚೆಗಳು, ವಿಚಾರಗೋಷ್ಠಿಗಳು, ಶಪಥ ಸ್ವೀಕಾರ ಕಾರ್ಯಕ್ರಮ ಮತ್ತು ಚಲನಚಿತ್ರ ಪ್ರದರ್ಶನ ಇತ್ಯಾದಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಅದು ಸೂಚಿಸಿದೆ.
Next Story