ಮೋದಿ ಕುರಿತು ಅವಮಾನಕಾರಿ ಹೇಳಿಕೆ: ರಾಹುಲ್ ವಿರುದ್ಧ ಎಫ್ಐಆರ್ ಕುರಿತು ಆದೇಶ ಕಾಯ್ದಿರಿಸಿದ ನ್ಯಾಯಾಲಯ
ಹೊಸದಿಲ್ಲಿ,ಮೇ 22: ಪ್ರಧಾನಿ ನರೇಂದ್ರ ಮೋದಿಯವರ ಕುರಿತು 2016ರಲ್ಲಿ ಅವಮಾನಕಾರಿ ಹೇಳಿಕೆಯನ್ನು ನೀಡಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶ ನೀಡುವಂತೆ ಆಗ್ರಹಿಸಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ತನ್ನ ಆದೇಶವನ್ನು ಸ್ಥಳೀಯ ನ್ಯಾಯಾಲಯವು ಬುಧವಾರ ಕಾಯ್ದಿರಿಸಿದ್ದು,ಜೂನ್ 7ಕ್ಕೆ ಪ್ರಕಟಿಸಲಿದೆ.
2016ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಸಮಾವೇಶವೊಂದರಲ್ಲಿ,ಪ್ರಧಾನಿಯವರು ಯೋಧರ ಸಾವುಗಳನ್ನು ರಾಜಕೀಯ ಲಾಭಗಳಿಕೆಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದ ರಾಹುಲ್ ಅವರನ್ನು ಬಣ್ಣಿಸಲು ‘ದಲ್ಲಾಳಿ’ ಶಬ್ದವನ್ನು ಉಪಯೋಗಿಸಿದ್ದರು. ಮೋದಿಯವರು ಕಾಶ್ಮೀರದಲ್ಲಿಯ ರಕ್ತಪಾತ ಮತ್ತು ಭಾರತಕ್ಕಾಗಿ ಸರ್ಜಿಕಲ್ ದಾಳಿಗಳನ್ನು ನಡೆಸಿದ್ದ ಯೋಧರ ರಕ್ತದ ಹಿಂದೆ ಬಚ್ಚಿಟ್ಟುಕೊಳ್ಳುತ್ತಿದ್ದಾರೆ. ಅವರು ಯೋಧರ ತ್ಯಾಗಗಳನ್ನು ದುರುಪಯೋಗಿಸಿ ಕೊಳ್ಳುತ್ತಿದ್ದಾರೆ ಮತ್ತು ಇದು ಅತ್ಯಂತ ತಪ್ಪಿನ ಕೆಲಸವಾಗಿದೆ ಎಂದಿದ್ದರು.
ನ್ಯಾಯವಾದಿ ಜೋಗಿಂದರ್ ತುಲಿ ಅವರು ಎ.25ರಂದು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ನ್ಯಾಯಾಲಯವು ಎ.26ರಂದು ನಿರ್ದೇಶಗಳನ್ನು ಹೊರಡಿಸಿದ ಬಳಿಕ ಕಳೆದ ವಾರ ದಿಲ್ಲಿ ಪೊಲೀಸರು ಕ್ರಮಾನುಷ್ಠಾನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಹೇಳಿಕೆಗಾಗಿ ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಬಹುದು ಎಂದು ಅವರು ತಿಳಿಸಿದ್ದರು.