ಮಾಲೆಗಾಂವ್ ಸ್ಪೋಟ ಪ್ರಕರಣ: ಪಂಚನಾಮೆ ಸಾಕ್ಷಿಗಳಿಗೆ ಎನ್ಐಎ ನ್ಯಾಯಾಲಯ ನೋಟಿಸ್
ಮುಂಬೈ, ಜೂ. 6: ಮಾಲೆಗಾಂವ್ ಸ್ಫೋಟ ಪ್ರಕರಣದೊಂದಿಗೆ ಸಂಬಂಧಿಸಿದ ಪಂಚನಾಮ ಸಾಕ್ಷಿಗಳಿಗೆ ಎನ್ಐಎ ನ್ಯಾಯಾಲಯ ಗುರುವಾರ ಬಂಧನಾದೇಶ ಜಾರಿ ಮಾಡಿದೆ.
ಸ್ಫೋಟದಿಂದ ಆಗಿರುವ ಹಾನಿ ಖಚಿತಪಡಿಸಲಾದ ಪಂಚನಾಮೆಗೆ ಸಹಿ ಹಾಕಿದ ಸಾಕ್ಷಿಗಳಿಗೆ ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ವಿನೋದ್ ಪಡಾಲ್ಕರ್ ನೋಟಿಸು ಜಾರಿ ಮಾಡಿದ್ದಾರೆ.
ನ್ಯಾಯಾಲಯದಲ್ಲಿ ದಿನನಿತ್ಯ ನಡೆಯುತ್ತಿರುವ ವಿಚಾರಣೆಯಲ್ಲಿ ಸಾಕ್ಷಿಗಳು ಹಾಜರಾಗುವಂತೆ ನ್ಯಾಯಾಲಯ ಪ್ರಾಸಿಕ್ಯೂಷನ್ಗೆ ಸೂಚಿಸಿದೆ. ಹಾಗೆಯೇ ಆರೋಪಿಗಳು ವಾರಕ್ಕೊಮ್ಮೆ ಹಾಜರಾಗುವಂತೆ ನಿರ್ದೇಶಿಸಿದೆ.
ಇದು ಜಾಮೀನು ಬಂಧನಾದೇಶ ಆಗಿರುವುದರಿಂದ ಸಾಕ್ಷಿಗಳು 5 ಸಾವಿರ ರೂಪಾಯಿ ಜಾಮೀನ್ ಬಾಂಡ್ ನೀಡಬೇಕಾಗಿದೆ.
Next Story