ಪಶ್ಚಿಮ ಬಂಗಾಳ: ಮೃತ ಟಿಎಂಸಿ ಮುಖಂಡನ ಕುಟುಂಬದ ಮೂವರ ಹತ್ಯೆ
ಬೆಹ್ರಾಂಪುರ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ ಮತ್ತೆ ಮೂವರ ಜೀವವನ್ನು ಬಲಿ ಪಡೆದಿದೆ.
ಚುನಾವಣಾ ಪೂರ್ವದಲ್ಲಿ ಹತ್ಯೆಯಾಗಿದ್ದ ತೃಣಮೂಲ ಕಾಂಗ್ರೆಸ್ ನಾಯಕ ಮುರ್ಶಿದಾಬಾದ್ ಜಿಲ್ಲೆಯ ಅಲ್ತಾಫ್ ಹುಸೈನ್ ಎಂಬವರ ಕುಟುಂಬದ ಮೂವರನ್ನು ಶನಿವಾರ ಹತ್ಯೆ ಮಾಡಲಾಗಿದೆ.
ಹುಸೈನ್ ಅವರ ಹತ್ಯೆಗೆ ಕಾರಣರಾದವರೇ, ಕುಚಿಯಾಮೋರಾ ಗ್ರಾಮದಲ್ಲಿರುವ ಹುಸೇನ್ ಮನೆಯ ಮೇಲೆ ದಾಳಿ ಮಾಡಿ ಮೂವರನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ದಾಳಿಕೋರರು ಹುಸೈನ್ ಮನೆ ಮೇಲೆ ಬಾಂಬ್ ಮತ್ತು ಗುಂಡಿನ ದಾಳಿ ನಡೆಸಿದ್ದು, ಹುಸೈನ್ ಅವರ ಪುತ್ರ ಸುಹೈಲ್ ರಾಣಾ, ಸಹೋದರ ಖೈರುದ್ದೀನ್ ಶೇಕ್ ಮತ್ತು ಅಳಿಯ ರಹೀದುಲ್ ಶೇಖ್ ಅವರನ್ನು ಹತ್ಯೆ ಮಾಡಿದ್ದಾರೆ.
ಟಿಎಂಸಿ ಸಂಸದ ಅಬು ತಾಹಿರ್ ಖಾನ್ ಪೊಲೀಸರ ನಿಷ್ಕ್ರಿಯತೆಯನ್ನು ಖಂಡಿಸಿದ್ದು, ತಕ್ಷಣ ದಾಳಿಕೋರರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
Next Story