ಮನೋಜ್ ತಿವಾರಿಗೆ ಜೀವ ಬೆದರಿಕೆ
ಹೊಸದಿಲ್ಲಿ, ಜೂ. 22: ಮೊಬೈಲ್ ಎಸ್ಎಂಎಸ್ ಸಂದೇಶದ ಮೂಲಕ ತನಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ದಿಲ್ಲಿಯ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ರವಿವಾರ ಹೇಳಿದ್ದಾರೆ.
‘‘ಜೀವ ಬೆದರಿಕೆ ಒಡ್ಡಿದ ಬಗ್ಗೆ ನಾನು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ’’ ಎಂದು ತಿವಾರಿ ತಿಳಿಸಿದ್ದಾರೆ.
ಎಸ್ಎಂಎಸ್ ಸಂದೇಶದಲ್ಲಿ ವ್ಯಕ್ತಿ, ‘‘ಕ್ಷಮಿಸಿ ಬಲವಂತದ ಕಾರಣಕ್ಕೆ ನಿಮ್ಮನ್ನು ಹತ್ಯೆಗೈಯಲು ನಾವು ನಿರ್ಧರಿಸಿದ್ದೇವೆ’’ ಎಂದು ಹೇಳಿದ್ದಾನೆ ಎಂದು ಅವರು ತಿಳಿಸಿದ್ದಾರೆ. ನಾವು ಔಪಚಾರಿಕ ಪೊಲೀಸ್ ದೂರು ನೀಡಿದ್ದೇವೆ ಎಂದು ದಿಲ್ಲಿಯ ಬಿಜೆಪಿ ನಾಯಕ ನೀಲಕಂಠ್ ಬಕ್ಷಿ ತಿಳಿಸಿದ್ದಾರೆ.
Next Story