ಸರಕಾರಿ ನಿಧಿಯ ‘ಸದ್ಬಳಕೆ’!: ಹೆಲಿಕಾಪ್ಟರ್ ನಲ್ಲಿ ತೆರಳಿ ಕನ್ವರಿಯಾ ಯಾತ್ರಿಗಳಿಗೆ ಹೂವು ಸುರಿದ ಅಧಿಕಾರಿಗಳು
ಗಾಝಿಯಾಬಾದ್, ಜು.30: ಸರಕಾರಿ ನಿಧಿಯ ದುರ್ಬಳಕೆ ಎಂಬಂತೆ ಸರಕಾರಿ ಅಧಿಕಾರಿಗಳು ಹೆಲಿಕಾಪ್ಟರ್ ನಲ್ಲಿ ತೆರಳಿ ಕನ್ವರಿಯಾ ಯಾತ್ರಾರ್ಥಿಗಳಿಗೆ ಹೂವಿನಮಳೆಗರೆದ ಘಟನೆ ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ನಡೆದಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಅಜಯ್ ಶಂಕರ್ ಪಾಂಡೆ ಮತ್ತು ಹಿರಿಯ ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್ ಸಿಂಗ್ ಜಿಲ್ಲಾದ್ಯಂತ ಹೆಲಿಕಾಪ್ಟರ್ ನಲ್ಲಿ ತೆರಳಿ ಕನ್ವರಿಯಾ ಯಾತ್ರಾರ್ಥಿಗಳ ಮೇಲೆ ಹೂವುಗಳ ಎಸಳುಗಳನ್ನು ಸುರಿದರು.
ಇದು ರಾಜ್ಯ ಸರಕಾರಕ್ಕೆ ಸೇರಿದ ಹೆಲಿಕಾಪ್ಟರ್ ಆಗಿದ್ದು, ಹರ್ಸೌನ್ ನಿಂದ ಹೊರಟಿತ್ತು. “ಹೂವು ಸುರಿಯುವುದರ ಜೊತೆಗೆ ನಾವು ಅವರ ಭದ್ರತೆಯನ್ನೂ ನೋಡಿಕೊಂಡೆವು” ಎಂದು ಪಾಂಡೆ ಹೇಳಿದರು.
Next Story