ಛಾತ್ ಪೂಜಾ ವೇಳೆ ಕಾಲ್ತುಳಿತ: ಇಬ್ಬರು ಮಕ್ಕಳು ಮೃತ್ಯು
ಪಾಟ್ನಾ, ನ.3: ವಿಶೇಷ ಛಾತ್ ಪೂಜಾ ವೇಳೆ ಕಾಲ್ತುಳಿತಕ್ಕೆ ಸಿಕ್ಕಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ದಿಯೊ ಸರಯ ದೇವಾಲಯದ ಬಳಿ ಈ ಘಟನೆ ನಡೆದಿದ್ದು, ಸೂರ್ಯ ಪೂಜೆಗಾಗಿ ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದ ವೇಳೆ ದುರಂತ ಸಂಭವಿಸಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿ ವಾಪಸ್ಸಾಗುತ್ತಿದ್ದ ವೇಳೆ ಈ ದುರಂತ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಇತರ ಕೆಲವು ಮಂದಿ ಭಕ್ತರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಮೃತ ಮಕ್ಕಳಲ್ಲಿ ಪಾಟ್ನಾದ ಆರು ವರ್ಷದ ಬಾಲಕ ಹಾಗೂ ಭೋಜ್ ಪುರ ಜಿಲ್ಲೆಯ ಬಾಲಕಿ ಸೇರಿದ್ದಾರೆ.
ಮೃತ ಮಕ್ಕಳ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಜಿಲ್ಲಾಧಿಕಾರಿ ರಾಹುಲ್ ರಂಜನ್ ಮಹಿವಾಲ್ ಮತ್ತು ಎಸ್ಪಿ ದೀಪಕ್ ಬರ್ನ್ವಾಲ್ ಮೃತ ಮಕ್ಕಳ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
Next Story